ADVERTISEMENT

ಕೋವಿಡ್‌ ಸೋಂಕು: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 4:03 IST
Last Updated 8 ಆಗಸ್ಟ್ 2020, 4:03 IST

ರಾಮನಗರ: ಜಿಲ್ಲೆಯಲ್ಲಿ ಕೋವಿ‌ಡ್‌ ಸೋಂಕಿನಿಂದಾಗಿ ಶುಕ್ರವಾರ ಮೂವರು ಮೃತಪಟ್ಟಿದ್ದಾರೆ. 63 ಮಂದಿಯಲ್ಲಿ ಹೊಸತಾಗಿ ಸೋಂಕು ಪತ್ತೆಯಾಗಿದೆ.

ಚನ್ನಪಟ್ಟಣ 17, ಕನಕಪುರ 12, ಮಾಗಡಿ 9 ಮತ್ತು ರಾಮನಗರದಲ್ಲಿ 25 ಪ್ರಕರಣಗಳು ವರದಿಯಾಗಿವೆ. ಸೋಂಕಿತರನ್ನು ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚನ್ನಪಟ್ಟಣ, ಕನಕಪುರ ಮತ್ತು ರಾಮನಗರದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆ ಆಗಿದೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 1532 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 346, ಕನಕಪುರ 311, ಮಾಗಡಿ 279 ಮತ್ತು ರಾಮನಗರ 596 ಪ್ರಕರಣಗಳು ಸೇರಿವೆ.

ADVERTISEMENT

35 ಮಂದಿ ಗುಣಮುಖ: ಶುಕ್ರವಾರ ಚನ್ನಪಟ್ಟಣ ತಾಲ್ಲೂಕಿನಲ್ಲಿ 8, ಕನಕಪುರ ತಾಲ್ಲೂಕಿನಲ್ಲಿ 7, ಮಾಗಡಿ ತಾಲ್ಲೂಕಿನಲ್ಲಿ 5 ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸೇರಿ ಒಟ್ಟಾರೆ 35 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 675 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 124, ಕನಕಪುರ 157, ಮಾಗಡಿ 178 ಮತ್ತು ರಾಮನಗರ 216 ಜನರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.