ADVERTISEMENT

ಕನಕಪುರ: ಎಮ್ಮೆ, ಹಸುಗಳನ್ನು ಕೊಂದ ಆನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 6:54 IST
Last Updated 6 ಮಾರ್ಚ್ 2020, 6:54 IST
   
""

ರಾಮನಗರ: ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಗ್ರಾಮಗಳಲ್ಲಿ ಶುಕ್ರವಾರ ಆನೆಯೊಂದು ದಾಂದಲೆ ನಡೆಸಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಸಾಸಲಪುರ ಗ್ರಾಮದಲ್ಲಿನ ಎರಡು ಸೀಮೆ ಹಸುಗಳ ಮೇಲೆ ಆನೆ ದಾಳಿ ನಡೆಸಿದೆ. ಕಾಲಿನಿಂದ ತುಳಿದು ಮರೀಗೌಡ ಎಂಬುವವರಿಗೆ ಸೇರಿದ ಎರಡು ಹಸುಗಳನ್ನು ಸಾಯಿಸಿದೆ.

ಪಕ್ಕದ ಹಲಸಿನ ಮರದೊಡ್ಡಿ ಗ್ರಾಮದ ಕೆಂಪೇಗೌಡ ಎಂಬುವವರಿಗೆ ಸೇರಿದ ಎಮ್ಮೆಯನ್ನೂ ಕೊಂದಿದೆ. ಪಕ್ಕದಲ್ಲಿದ್ದ ಹಸುಗಳ ಮೇಲೆಯೂ‌ ದಾಳಿ ನಡೆಸಿದೆ. ಬೈಕ್ ಒಂದನ್ನು ಜಖಂಗೊಳಿಸಿದೆ.

ಸಾರ್ವಜನಿಕರು ಪಟಾಕಿ ಸಿಡಿಸಿ ಆನೆಯನ್ನು ಅಲ್ಲಿಂದ ಓಡಿಸಿದ್ದಾರೆ. ಸದ್ಯ ಆನೆಯು ಕಬ್ಬಾಳು ವಲಯದ ಹಲಸಿನ ಮರದೊಡ್ಡಿ ಅರಣ್ಯದೊಳಗೆ ಸೇರಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ADVERTISEMENT
ಆನೆ ದಾಳಿಯಿಂದ ಮೃತಪಟ್ಟಿರುವ ಎಮ್ಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.