ADVERTISEMENT

ರಾಗಿಮೆದೆಗೆ ಬೆಂಕಿ: ಸಂಪೂರ್ಣ ಭಸ್ಮ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:29 IST
Last Updated 6 ಫೆಬ್ರುವರಿ 2019, 14:29 IST
ಮಾಗಡಿ ತಾಲ್ಲೂಕಿನ ಕೊಟ್ಟಗಾರಹಳ್ಳಿ ದಲಿತ ಪೂಜಾರಿ ನಂಜುಂಡಯ್ಯ ಅವರ ರಾಗಿಮೆದೆಗೆ ದುಷ್ಮರ್ಮಿಗಳು ಬೆಂಕಿಹಚ್ಚಿರುವುದು
ಮಾಗಡಿ ತಾಲ್ಲೂಕಿನ ಕೊಟ್ಟಗಾರಹಳ್ಳಿ ದಲಿತ ಪೂಜಾರಿ ನಂಜುಂಡಯ್ಯ ಅವರ ರಾಗಿಮೆದೆಗೆ ದುಷ್ಮರ್ಮಿಗಳು ಬೆಂಕಿಹಚ್ಚಿರುವುದು   

ಮಾಡಬಾಳ್‌(ಮಾಗಡಿ): ಕೊಟ್ಟಗಾರಹಳ್ಳಿಯಲ್ಲಿ ಮಂಗಳವಾರ ರಾತ್ರಿ ತೆನೆ ಇದ್ದ ರಾಗಿಮೆದೆಗೆದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ದಲಿತ ಪೂಜಾರಿ ನಂಜುಂಡಯ್ಯ ಅವರು ಹೊಲದಲ್ಲಿ ಬಣವೆ ಮಾಡಿದ್ದ ತೆನೆಸಹಿತ ರಾಗಿಮೆದೆಗೆ ಬೆಂಕಿ ಹಚ್ಚಿದ್ದರಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಂದಾಜು ₹30 ಸಾವಿರ ಬೆಲೆಬಾಳುವ ರಾಗಿಬಣವೆ ಸುಟ್ಟು ಭಸ್ಮವಾಗಿದೆ. ಸಾಕಿರುವ ಹಸು ಮತ್ತು ಕರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತ ಸಂಕಟ ತೋಡಿಕೊಂಡಿದ್ದಾರೆ.

‘ರೈತನಿಗೆ ನಷ್ಟವಾಗಿದೆ. ಈ ನಷ್ಟ ತುಂಬಿಸಿಕೊಡಬೇಕು’ ಎಂದು ಮುಖಂಡ ಉಮೇಶ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.