ADVERTISEMENT

ಜನಪದ ಗಾಯಕರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 13:45 IST
Last Updated 11 ಮಾರ್ಚ್ 2019, 13:45 IST
ಹಂಪಿ ಉತ್ಸವದಲ್ಲಿ ಜನಪದ ಸಂಗೀತ ಕಾರ್ಯಕ್ರಮ ನೀಡಿದ ಚನ್ನಪಟ್ಟಣ ತಾಲ್ಲೂಕಿನ ಗಾಯಕರಿಗೆ ಸಂಸದ ಉಗ್ರಪ್ಪ, ಸಚಿವ ಈ.ತುಕಾರಾಂ ಪ್ರಶಸ್ತಿ ನೀಡಿದರು
ಹಂಪಿ ಉತ್ಸವದಲ್ಲಿ ಜನಪದ ಸಂಗೀತ ಕಾರ್ಯಕ್ರಮ ನೀಡಿದ ಚನ್ನಪಟ್ಟಣ ತಾಲ್ಲೂಕಿನ ಗಾಯಕರಿಗೆ ಸಂಸದ ಉಗ್ರಪ್ಪ, ಸಚಿವ ಈ.ತುಕಾರಾಂ ಪ್ರಶಸ್ತಿ ನೀಡಿದರು   

ಚನ್ನಪಟ್ಟಣ: ಹಂಪಿ ಉತ್ಸವದಲ್ಲಿ ತಾಲ್ಲೂಕಿನ ಜನಪದ ಗಾಯಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಪ್ರಶಸ್ತಿ ಪಡೆದಿದ್ದಾರೆ.

ತಾಲ್ಲೂಕಿನ ಗಾಯಕರಾದ ಬೇವೂರು ರಾಮಯ್ಯ, ಎಚ್.ಎಂ.ರೂಪ, ಸುಣ್ಣಘಟ್ಟ ಎಸ್.ಬಿ.ಗಂಗಾಧರ್, ಬಿ.ಕೆ.ಪ್ರಕಾಶ್ ಬಾಣಂತಹಳ್ಳಿ, ರಾಮಮೂರ್ತಿ, ಮಹದೇಶ್, ನಾಗೇಶ್ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಸದ ವಿ.ಎಸ್.ಉಗ್ರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.