ADVERTISEMENT

ರಾಮನಗರದಲ್ಲಿ ಮಳೆ ಆರ್ಭಟ: ಬೆಳೆ, ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 9:49 IST
Last Updated 7 ಏಪ್ರಿಲ್ 2020, 9:49 IST
ರಾಮನಗರ ಜಿಲ್ಲೆಯ ತಾಳನಕುಪ್ಪೆ ಗ್ರಾಮದಲ್ಲಿ ಬಾಳೆ ಬೆಳೆ ನೆಲಕ್ಕೆ ಉರುಳಿದೆ
ರಾಮನಗರ ಜಿಲ್ಲೆಯ ತಾಳನಕುಪ್ಪೆ ಗ್ರಾಮದಲ್ಲಿ ಬಾಳೆ ಬೆಳೆ ನೆಲಕ್ಕೆ ಉರುಳಿದೆ   

ರಾಮನಗರ: ಜಿಲ್ಲೆಯಾದ್ಯಂತ ಮಂಗಳವಾರಬೆಳಗಿನ ಜಾವ ವರುಣ ಆರ್ಭಟಿಸಿದ್ದು, ಉತ್ತಮ ಮಳೆ ಸುರಿದಿದೆ.

ಮಳೆಯಿಂದಾಗಿ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದೆ. ರಾಮನಗರ ತಾಲ್ಲೂಕಿನ ಬೈಚೋಹಳ್ಳಿಯಲ್ಲಿ ಹಲವು ಮನೆಗಳ ಜಂಕ್ ಶೀಟ್ ಛಾವಣಿ ಹಾರಿಹೋಗಿದೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ತಾಳನಕುಪ್ಪೆ ಗ್ರಾಮದಲ್ಲಿ ಬಾಳೆ ಬೆಳೆ ನೆಲಕ್ಕೆ ಒರಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದು, ನಷ್ಟದ ಅಂದಾಜು ಮಾಡುತ್ತಿದ್ದಾರೆ.

ADVERTISEMENT
ಮಳೆಯಿಂದಾಗಿಮನೆಗಳ ಛಾವಣಿ ಹಾರಿಹೋಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.