ಕನಕಪುರ: ತಾಲ್ಲೂಕಿನ ಕಂಚನಹಳ್ಳಿಯಲ್ಲಿ ಭೀಮನಕಿಂಡಿ ಬಸವೇಶ್ವರಸ್ವಾಮಿ ಅಗ್ನಿಕೊಂಡೋತ್ಸವ ಮಂಗಳವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಗ್ರಾಮದಲ್ಲಿ ಓಲೆಬಂಡಿ ಕಾರ್ಯಕ್ರಮ ನಡೆದು ರಾತ್ರಿ ಅನ್ನದಾಸೋಹ ನಡೆಯಿತು. ಮಂಗಳವಾರ ಬೆಳಗ್ಗೆ ಅರ್ಚಕ ಶಿವು ದೇವರ ಕರಗ ಹೊತ್ತು ಅಗ್ನಿಕೊಂಡ ಯಶಸ್ವಿಯಾಗಿ ಆಯ್ದರು.
ಅಗ್ನಿಕೊಂಡೋತ್ಸವ ನಂತರ ಅನ್ನದಾಸೋಹ ನಡೆಯಿತು. ನಂತರ ಮೆರವಣಿಗೆ, ರಾತ್ರಿ ಚಿಕ್ಕಮ್ಮದೇವಿ ಕರಗ ಮಹೋತ್ಸವ ಯಶಸ್ವಿಯಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.