ADVERTISEMENT

ಶಿವನಹಳ್ಳಿ ಗ್ರಾಮದಲ್ಲಿ ಕೋರಣ್ಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 12:56 IST
Last Updated 10 ಸೆಪ್ಟೆಂಬರ್ 2019, 12:56 IST
ಕನಕಪುರ ಶಿವನಹಳ್ಳಿಯಲ್ಲಿ ನಡೆದ ವೀರಭದ್ರಸ್ವಾಮಿ ಅಗ್ನಿಕೊಂಡವನ್ನು ಅರ್ಚಕ ರುದ್ರಣ್ಣ ಪ್ರವೇಶಿಸಿರುವುದು
ಕನಕಪುರ ಶಿವನಹಳ್ಳಿಯಲ್ಲಿ ನಡೆದ ವೀರಭದ್ರಸ್ವಾಮಿ ಅಗ್ನಿಕೊಂಡವನ್ನು ಅರ್ಚಕ ರುದ್ರಣ್ಣ ಪ್ರವೇಶಿಸಿರುವುದು   

ಕನಕಪುರ: ಇಲ್ಲಿನ ಶಿವನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿಯ ಗೌರಿ ಹಬ್ಬದ ಕೊಂಡೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಬೆಳಿಗ್ಗೆ 5 ಗಂಟೆಗೆ ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ, ಅಕ್ಕಿಪೂಜೆ ನಡೆಯಿತು. ಯಳವಾರೋತ್ಸವ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗಿತು.

ಮಂಗಳವಾರ ಬೆಳಿಗ್ಗೆ 4 ಗಂಟೆಗೆ ದೇವರಿಗೆ ರುದ್ರಾಭಿಷೇಕವಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ 6 ಗಂಟೆಗೆ ಅಗ್ನಿಕೊಂಡೋತ್ಸವ ನಡೆಸಿ ವೀರಭದ್ರಸ್ವಾಮಿಯ ಮೆರವಣಿಗೆ ನಡೆಯಿತು. ಕಾಲೊನಿಯಲ್ಲಿ 8 ಗಂಟೆಗೆ ಕ್ಯಾತಮ್ಮನ ಉತ್ಸವ ನೆರವೇರಿತು.

ADVERTISEMENT

ನಂತರ 9 ಗಂಟೆಗೆ ದೇಗುಲಮಠದ ಕಿರಿಯ ಶ್ರೀ ಚನ್ನಬಸವಸ್ವಾಮಿಗಳಿಂದ ಸಂಜೆ 4 ಗಂಟೆವರೆಗೂ ಗ್ರಾಮದ ಪ್ರತಿ ಮನೆಯಲ್ಲೂ ಗುರು ಕೋರಣ್ಯ ಭಿಕ್ಷಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಅರ್ಚಕ ರುದ್ರಣ್ಣ ವೀರಭದ್ರಸ್ವಾಮಿಯ ಅಗ್ನಿಕೊಂಡವನ್ನು ಪ್ರವೇಶಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ಶಿವನಹಳ್ಳಿ, ಗಡಸಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಕೊಂಡ ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.