ADVERTISEMENT

ಮ್ಯಾಕ್ಸಿ ಕ್ಯಾಬ್‌ ಡಿಕ್ಕಿ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 13:12 IST
Last Updated 25 ಜೂನ್ 2019, 13:12 IST
ಶಶಾಂಕ್‌
ಶಶಾಂಕ್‌   

ಕುದೂರು(ಮಾಗಡಿ): ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಗಾರ್ಮೆಂಟ್ಸ್ ಮ್ಯಾಕ್ಸಿ ಕ್ಯಾಬ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 75ರ ಮರೂರು ಹ್ಯಾಂಡ್‌ಪೋಸ್ಟ್ ಬಳಿ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮೃತ ಬಾಲಕ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಸೂರ್ಯನಾರಾಯಣ ಅವರ ಪುತ್ರ ಶಶಾಂಕ್(16) ಎಂದು ಗುರುತಿಸಲಾಗಿದೆ.

ಚಿಕ್ಕಪ್ಪ ಸಂಪತ್ ಶ್ರೀವತ್ಸ ಅವರೊಂದಿಗೆ ಶಶಾಂಕ್‌ ಆಂಜನೇಯಸ್ವಾಮಿ ಪೂಜೆಗೆ ಮನೆಯಿಂದ ಸ್ಕೂಟಿಯಲ್ಲಿ ತೆರಳುತ್ತಿದ್ದರು. ರಸ್ತೆ ಬದಿಯ ಗಿಡದಲ್ಲಿದ್ದ ಹೂವು ಕಿತ್ತು ತರಲು ಅವರ ಚಿಕ್ಕಪ್ಪ ಸ್ಕೂಟಿ ನಿಲ್ಲಿಸಿ ಹೋಗಿದ್ದರು. ರಸ್ತ ಬದಿ ನಿಂತಿದ್ದ ಶಶಾಂಕ್‌ಗೆ ಎದುರಿನಿಂದ ಬಂದ ಮ್ಯಾಕ್ಸಿ ಕ್ಯಾಬ್ ಡಿಕ್ಕಿ ಹೊಡೆದಿದೆ.

ಶಶಾಂಕ್‌ ಮೇಲುಕೋಟೆ ಸಂಸ್ಕೃತ ಪಾಠ ಶಾಲೆಯಲ್ಲಿ ವೇದ ಅಧ್ಯಯನ ಕಲಿಯುತ್ತಿದ್ದ. ರಜೆ ಇದ್ದ ಕಾರಣ ಗ್ರಾಮಕ್ಕೆ ಬಂದಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.