ADVERTISEMENT

ಸದಸ್ಯತ್ವ ಅಭಿಯಾನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 14:50 IST
Last Updated 8 ಸೆಪ್ಟೆಂಬರ್ 2019, 14:50 IST
ಭಾನುವಾರ ಕುರುಬರ ಸಂಘದ ತಾಲ್ಲೂಕು ಘಟಕದ ಪೂರ್ವಭಾವಿ ಸಭೆ ನಡೆಯಿತು
ಭಾನುವಾರ ಕುರುಬರ ಸಂಘದ ತಾಲ್ಲೂಕು ಘಟಕದ ಪೂರ್ವಭಾವಿ ಸಭೆ ನಡೆಯಿತು   

ರಾಮನಗರ: ಕುರುಬರ ಸಂಘವನ್ನು ಮತ್ತಷ್ಟು ಬಲಗೊಳಿಸಲಾಗುವುದು ಎಂದು ಕುರುಬರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಚನ್ನಮಾನಹಳ್ಳಿ ನಾಗೇಶ್ ಹೇಳಿದರು.

ಇಲ್ಲಿನ ಕುಂಬಾಪುರ ಬಳಿಯಿರುವ ಕುರುಬರ ಸಂಘದಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಂಘದ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ಕುರುಬ ಸಮುದಾಯದ ಜನರಿದ್ದಾರೆ. ಸರ್ಕಾರದಿಂದ ಕುರುಬ ಸಮಾಜದವರಿಗೆ ಇರುವ ಸೌಲಭ್ಯ, ಯೋಜನೆಗಳ ಬಗ್ಗೆ ತಿಳಿಸಿಕೊಡಲಾಗುವುದು. ಇದೇ 10 ರಂದು ತಾಲ್ಲೂಕಿನಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಂಘದ ಕಾರ್ಯದರ್ಶಿ ಬಸವರಾಜು, ಖಜಾಂಚಿ ಚನ್ನಮಾನಹಳ್ಳಿ ಉಮೇಶ್, ಸಂಘಟನಾ ಕಾರ್ಯದರ್ಶಿ ಅಂಜನಾಪುರ ರೇವಣ್ಣ, ನಿರ್ದೇಶಕರಾದ ಚಿಕ್ಕೇನಹಳ್ಳಿ ಚಂದ್ರಣ್ಣ, ಕುಂಬಾಪುರ ಹರಳಪ್ಪ, ಸಿದ್ದಪ್ಪ, ನಾರಾಯಣಪ್ಪ, ಬಿಡದಿ ಕಗ್ಗಲ್ಲಯ್ಯ, ಆರ್. ರೇಣುಕಪ್ಪ, ನಾಗರಾಜು, ದೊಳ್ಳಯ್ಯ, ರಾಜೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.