ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ರಾಮನಗರ: 66/11 ಕೆವಿ ರಾಮನಗರ-ಬೇವೂರು ಲೈನ್ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಚನ್ನಪಟ್ಟಣ ಮತ್ತು ರಾಮನಗರ ತಾಲ್ಲೂಕಿನ ಈ ಕೆಳಗಿನ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಂಕಲಗೆರೆ, ಕೂರಣಗೆರೆ, ಗೋವಿಂದಹಳ್ಳಿ, ದೊಡ್ಡಮಳ್ಳೂರು, ಬೈರಾಪಟ್ಟಣ, ದಶವಾರ, ಮಾಕಳಿ, ನಾಯಿದೊಳ್ಳೆ ಗ್ರಾಮ, ಕೃಷ್ಣಪುರದೊಡ್ಡಿ, ಬೇವೂರು, ವಂದಾರಗುಪ್ಪೆ, ದೇವರಹೊಸಹಳ್ಳಿ, ಸಂಕಲಗೆರೆ ಸೋಲಾರ್ ಪವರ್ ಪ್ಲಾಂಟ್, ಜಾನಪದಲೋಕ, ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಕುಂಬಾಪುರ, ಬಿ.ಜಿ.ಎಸ್ ಶಾಲೆ, ರಾಜೀವ್ ಗಾಂಧಿಪುರ, ಚೌಡೇಶ್ವರಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.