ಮಾಗಡಿ: ಇಲ್ಲಿನ ಬ್ಯಾಲಕೆರೆ ವಿಎಸ್ಎಸ್ಎನ್ ಗೆ ಅಧ್ಯಕ್ಷರಾಗಿ ರವಿಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ವೆಂಕಟರಂಗಯ್ಯ, ನಿರ್ದೇಶಕರಾದ ಬಸವರಾಜು, ವಿಮಲ, ಯತೀಶ್, ಹನುಮಯ್ಯ, ಮರುಳಸಿದ್ದಪ್ಪ, ರೇಣುಕಪ್ಪ, ಮುಕ್ತಿಯಾರ್ ಅಹಮದ್, ಹಾಲು ಉತ್ಪಾಕದರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ, ತಗ್ಗಿಕುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ ಮುಕುಂದ, ಸದಸ್ಯರಾದ ನಾಗರತ್ನ, ಆಶಾ ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಚಂದ್ರೇಗೌಡ ಮಾತನಾಡಿ ‘ಅರ್ಹ ರೈತರಿಗೆ ಸಾಲ ವಿತರಿಸಬೇಕು. ಯಾವುದೇ ರೈತರನ್ನು ಕಡೆಗಣಿಸದೆ ಸದಸ್ಯತ್ವ ನೀಡಿ, ಸಂಘದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಎಲ್ಲರೂ ಒಗ್ಗೂಡಿ ದುಡಿಯಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.