ADVERTISEMENT

ರಾಮನಗರ: ಶಾಲಾ ಕಾಂಪೌಂಡ್‌ ಕೆಡವಿದ ಆನೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:23 IST
Last Updated 27 ಮೇ 2021, 21:23 IST
ಕೂನಗಲ್ ಪ್ರೌಢಶಾಲೆ ಕಾಂಪೌಂಡ್ ಆನೆ ದಾಳಿಯಿಂದ ಹಾನಿಗೀಡಾಗಿರುವುದು
ಕೂನಗಲ್ ಪ್ರೌಢಶಾಲೆ ಕಾಂಪೌಂಡ್ ಆನೆ ದಾಳಿಯಿಂದ ಹಾನಿಗೀಡಾಗಿರುವುದು   

ರಾಮನಗರ: ತಾಲ್ಲೂಕಿನ ಕೂನಗಲ್ ಗ್ರಾಮದಲ್ಲಿ ಒಂಟಿ ಆನೆಯೊಂದು ಬುಧವಾರ ರಾತ್ರಿ ದಾಳಿ ಮಾಡಿದ್ದು, ಪ್ರೌಢಶಾಲೆಯ ಕಾಂಪೌಂಡ್‌ ಕೆಡವಿದೆ.

ಕೈಲಾಂಚ ಗ್ರಾ.ಪಂ. ವ್ಯಾಪ್ತಿಯ ನಾಗೋಹಳ್ಳಿ ಗ್ರಾಮದ ಚಿಕ್ಕಬೈರೇಗೌಡ ಎಂಬುವರ ಜಮೀನಿನಲ್ಲಿ ರಾಶಿ ಹಾಕಿದ್ದ ರಾಗಿತೆನೆಯನ್ನು ತಿಂದಿದೆ. ಕಾವೇರಿ ವನ್ಯಜೀವಿಧಾಮದಿಂದ ಬಂದಿರುವ ಆನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಆನೆ ಕಳೆದ ವಾರದಿಂದ ತೆಂಗಿನಕಲ್ಲು ಅರಣ್ಯ ಬಿಟ್ಟು ಅರ್ಕಾವತಿ ನದಿ ದಾಟಿ ಈ ಭಾಗದಲ್ಲಿ ಓಡಾಡುತ್ತಿದೆ. ಕೂನಗಲ್, ನಾಗೋಹಳ್ಳಿ, ಹಂದಿಗೊಂದಿ, ಕೈಲಾಂಚ, ಹುಣಸನಹಳ್ಳಿ ಸುತ್ತಮುತ್ತಲ ಗ್ರಾಮಗಳ ಹೊಲದಲ್ಲಿನ ಫಸಲು ಹಾಳು ಮಾಡುತ್ತಿದೆ.

ಒಂಟಿ ಆನೆಯನ್ನು ಕಾಡಿಗೆ ಅಟ್ಟಬೇಕು. ಈಗ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.