ಮಾಗಡಿ: ‘ಭಾಷಣ ಮತ್ತು ಪ್ರಚಾರ ಬಯಸುವ ಬದಲು ದಿನಗೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ನೀಡಿ ಹಸಿವು ನೀಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ದಲಿತ ಹಕ್ಕುಗಳ ಒಕ್ಕೂಟ ಕರ್ನಾಟಕ ಜಿಲ್ಲಾ ಸಂಚಾಲಕಿ ಎಸ್.ಜಿ.ವನಜಾ ಹೇಳಿದರು.
ಚಂದೂರಾಯನ ಹಳ್ಳಿ ದಲಿತ ಕಾಲೊನಿಯಲ್ಲಿ ‘ಹಸಿವು ಮುಕ್ತ ಭಾರತ ಘೋಷಣೆ’ಯಡಿ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
‘ಲಾಕ್ಡೌನ್ ಜಾರಿಗೊಳಿಸುವ ಮುನ್ನ ಕಾರ್ಮಿಕರು ತಮ್ಮ ಊರುಗಳಿಗೆ ತೆರಳು ಅವಕಾಶ ನೀಡಬೇಕಿತ್ತು. ಅವೈಜ್ಞಾನಿಕವಾಗಿ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಲಕ್ಷಾಂತರ ಕಾರ್ಮಿಕರು ಹಸಿವಿನಿಂದ ನರಳಿದ್ದಾರೆ. ಬರಿಗಾಲಿನಲ್ಲಿ ಕಿ.ಮೀಗಟ್ಟಲೆ ಪ್ರಯಾಣಿಸಿದ್ದಾರೆ. ಅವರ ಹಸಿವು ನೀಗಿಸಲು ಸೂಕ್ತ ಯೋಜನೆ ಜಾರಿಗೊಳಿಸಿಲ್ಲ. ಸರ್ಕಾರ ಕೂಲಿಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.