ADVERTISEMENT

ಮಾಗಡಿ:‌ ರೈಲಿಗೆ ಸಿಲುಕಿ ಕುರಿಗಾಹಿ ಸಾವು

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 3:25 IST
Last Updated 21 ಜೂನ್ 2021, 3:25 IST
‌ಗಂಗನಂಜಯ್ಯ
‌ಗಂಗನಂಜಯ್ಯ   

ಮಾಗಡಿ:‌ ಕುರಿಗಾಹಿಯೊಬ್ಬರು ರೈಲಿಗೆ ಸಿಲುಕಿ ಮೃತ‍ಪಟ್ಟಿರುವ ಘಟನೆ ತಾಲ್ಲೂಕಿನ ಮರೂರು ಬಳಿ ಭಾನುವಾರ ನಡೆದಿದೆ.

ಮೃತರನ್ನು ಗಂಗನಂಜಯ್ಯ(65) ಎಂದು ಗುರುತಿಸಲಾಗಿದೆ. ರೈಲ್ವೆ ಹಳಿ ಮೇಲೆ ಹೋದ ಕುರಿಗಳನ್ನು ಉಳಿಸಲು ಹೋಗಿ ಅವರು ರೈಲಿಗೆ ಸಿಲುಕಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು. ರೈಲ್ವೆ ಹಳಿ ಬಳಿ ತಡೆಗೋಡೆ ನಿರ್ಮಿಸಿಲ್ಲದ ಕಾರಣ ಜನರು ಬಲಿಯಾಗುತ್ತಿದ್ದಾರೆ. ರಕ್ಷಣಾ ಬೇಲಿ ನಿರ್ಮಿಸುವಂತೆ ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT