ರಾಮನಗರ: ‘ಸಚಿವ ಮಾಧುಸ್ವಾಮಿ ಜೊತೆ ಫೋನಿನಲ್ಲಿ ಮಾತನಾಡಿರುವುದು ನಾನೇ. ಸಹಕಾರ ಬ್ಯಾಂಕ್ನಲ್ಲಿನ ಅನ್ಯಾಯದ ಬಗ್ಗೆ ದೂರು ನೀಡಲು ಕರೆ ಮಾಡಿದ್ದೆ’ ಎಂದು ಚನ್ನಪಟ್ಟಣದ ಸಾಮಾಜಿಕ ಹೋರಾಟಗಾರ ಭಾಸ್ಕರ್ ಎಂಬುವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್ ‘ನಾನು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕರೆ ಮಾಡಿದ್ದೆ. ಆದರೆ, ಅವರು ಯಾರು ಕರೆ ಸ್ವೀಕರಿಸಲಿಲ್ಲ. ಸಚಿವ ಮಾಧುಸ್ವಾಮಿ ಮಾತ್ರ ಕರೆ ಸ್ವೀಕರಿಸಿದರು’ ಎಂದು ಮಾಹಿತಿ ನೀಡಿದರು.
‘ಸಚಿವರ ಅಸಹಾಯಕತೆ ಕುರಿತು ಆಡಿಯೋ ಹಂಚಿಕೊಂಡಿದ್ದೇನೆ. ಬೇಕಾ ದರೆ, ಆಡಿಯೊ ವೈರಲ್ ಆಗಿರುವ ಕುರಿತು ನನ್ನ ಮೇಲೆ ಕ್ರಮ ಜರುಗಿಸಲಿ. ಜವಾಬ್ದಾರಿ ನಿರ್ವಹಿಸಲು ಆಗಲಿಲ್ಲವಾದರೆ ರಾಜೀನಾಮೆ ನೀಡಲಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.