ADVERTISEMENT

ಜಮ್ಮುವಿನಲ್ಲಿ ಮಾಗಡಿಯ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 5:22 IST
Last Updated 15 ಜನವರಿ 2020, 5:22 IST
ವೆಂಕಟ ನರಸಿಂಹಮೂರ್ತಿ
ವೆಂಕಟ ನರಸಿಂಹಮೂರ್ತಿ   

ರಾಮನಗರ: ಜಮ್ಮುವಿನ ಉಧಂಪುರ ಕ್ಯಾಂಪಿನಲ್ಲಿ ಕಾರ್ಯ‌ ನಿರ್ವಹಿಸುತ್ತಿದ್ದ ಯೋಧ ವೆಂಕಟ‌ ನರಸಿಂಹಮೂರ್ತಿ (29) ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ಸದ್ಯ ಮಾಗಡಿಯ ಹೊಂಬಾಳಪೇಟೆಯಲ್ಲಿ ಇರುವ ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಯೋಧನ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಗುರುವಾರ ರಾತ್ರಿ‌ ಇಲ್ಲವೇ ಶುಕ್ರವಾರ ಮೃತದೇಹವನ್ನು‌ ಮಾಗಡಿಗೆ ತರುವ ನಿರೀಕ್ಷೆ ಇದೆ.

ಹೊಂಬಾಳಪೇಟೆಯ ಪಾಪಣ್ಣ ಅವರ ಇಬ್ಬರು ಮಕ್ಕಳ ಪೈಕಿ ಕಿರಿಯನಾದ ವೆಂಕಟ ಬಾಲ್ಯದ‌ ದಿನಗಳಲ್ಲಿ ಉತ್ತಮ ಕುಸ್ತಿಪಟು. ಬಿಬಿಎಂ ಪದವಿ‌ ಓದಿ ಐದು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇದೀಗ ಅವರ ಸಾವಿನ ಸುದ್ದಿ‌ ಕೇಳಿ ತಂದೆ-ತಾಯಿಗೆ ಆಘಾತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.