ADVERTISEMENT

ಸಿಡಿಲು ಬಡಿದು ಸೀಮೆಹಸು ಸಾವು; ವೈಯಕ್ತಿಕ ಸಹಾಯ ಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:45 IST
Last Updated 13 ಮೇ 2019, 13:45 IST
ಸಿಡಿಲು ಬಡಿದು ಹಸುಗಳನ್ನು ಕಳೆದುಕೊಂಡಿರುವ ಮರಿಹೊನ್ನಮ್ಮ ಅವರಿಗೆ ಕೆಇಬಿ ರಾಜಣ್ಣ ವೈಯಕ್ತಿಕ ಸಹಾಯ ಧನ ನೀಡಿದರು
ಸಿಡಿಲು ಬಡಿದು ಹಸುಗಳನ್ನು ಕಳೆದುಕೊಂಡಿರುವ ಮರಿಹೊನ್ನಮ್ಮ ಅವರಿಗೆ ಕೆಇಬಿ ರಾಜಣ್ಣ ವೈಯಕ್ತಿಕ ಸಹಾಯ ಧನ ನೀಡಿದರು   

ಮಾಗಡಿ: ಸಿಡಿಲು ಬಡಿದು ಸೀಮೆ ಹಸುಗಳು ಮೃತಪಟ್ಟ ಮುಪ್ಪೇನಹಳ್ಳಿ ಮರಿಹೊನ್ನಮ್ಮ ಅವರ ನಿವಾಸಕ್ಕೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೆಇಬಿ ರಾಜಣ್ಣ ಮತ್ತು ನರಸಿಂಹಮೂರ್ತಿ ಭೇಟಿ ನೀಡಿ ವೈಯಕ್ತಿಕವಾಗಿ ₹20 ಸಾವಿರ ಸಹಾಯ ಧನ ನೀಡಿದರು.

ಮರಿಹೊನ್ನಮ್ಮ ಮಾತನಾಡಿ, ಎರಡು ಹಸುಗಳಿಗೆ ವಿಮೆ ಮಾಡಿಸಲಾಗಿದೆ. ಕಂತಿನ ಹಣ ಕಟ್ಟುವಾಗ ದಿನಾಂಕ ತಿಳಿಯದೆ ಹಣ ಪಾವತಿಸಿಲ್ಲ. ಡೇರಿಯಿಂದ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT