ಮಾಗಡಿ: ಸಿಡಿಲು ಬಡಿದು ಸೀಮೆ ಹಸುಗಳು ಮೃತಪಟ್ಟ ಮುಪ್ಪೇನಹಳ್ಳಿ ಮರಿಹೊನ್ನಮ್ಮ ಅವರ ನಿವಾಸಕ್ಕೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೆಇಬಿ ರಾಜಣ್ಣ ಮತ್ತು ನರಸಿಂಹಮೂರ್ತಿ ಭೇಟಿ ನೀಡಿ ವೈಯಕ್ತಿಕವಾಗಿ ₹20 ಸಾವಿರ ಸಹಾಯ ಧನ ನೀಡಿದರು.
ಮರಿಹೊನ್ನಮ್ಮ ಮಾತನಾಡಿ, ಎರಡು ಹಸುಗಳಿಗೆ ವಿಮೆ ಮಾಡಿಸಲಾಗಿದೆ. ಕಂತಿನ ಹಣ ಕಟ್ಟುವಾಗ ದಿನಾಂಕ ತಿಳಿಯದೆ ಹಣ ಪಾವತಿಸಿಲ್ಲ. ಡೇರಿಯಿಂದ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.