ಮಾಗಡಿ: ದೇವರ ದರ್ಶನಕ್ಕೆ ಹೋಗಿ, ಕೈಕಾಲು ತೊಳೆಯಲು ನೀರಿಗೆ ಇಳಿದು ಜಾರಿಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಮಾಡಬಾಳ್ ಪಂಚಾಯಿತಿ ವ್ಯಾಪ್ತಿಯ ಮಲವರ ಪಾಳ್ಯದ ಬಳಿ ನಡೆದಿದೆ.
ಮೃತರನ್ನು ಚನ್ನಪಟ್ಟಣದ ಕೋಟೆ ನಿವಾಸಿ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಶ್ರೀಕಂಠಯ್ಯ ಅವರ ಪುತ್ರ ಹಿತೇಷ್ (17) ಎಂದು ಗುರುತಿಸಲಾಗಿದೆ. ಮೃತರ ಅಣ್ಣ ಮೋನಿಶ್, ಇಬ್ಬರು ಗೆಳೆಯರೊಂದಿಗೆ ಮಲವರ ಪಾಳ್ಯದ ಬೀರಪ್ಪ ದೇವರ ದರ್ಶನಕ್ಕೆ ಬಂದಿದ್ದಾಗ ಬಂಡೆ ಕೆಳಗಿನ ಕಟ್ಟೆಯ ನೀರಿಗೆ ಇಳಿದಿದ್ದಾರೆ. ಜಾರಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೃತರ ಬಂಧುಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.