ADVERTISEMENT

ಹೊಂಬುಜ ಗುಡ್ಡದ ಬಸದಿ ಬಾಹುಬಲಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2013, 6:12 IST
Last Updated 23 ಜನವರಿ 2013, 6:12 IST
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಕ್ಷೇತ್ರದ ಗುಡ್ಡದ ಬಸದಿಯಲ್ಲಿ  ಪ್ರಾಚೀನ ಕಾಲದ ಬಾಹುಬಲಿ ವಿಗ್ರಹ ಮತ್ತು ನೂತನವಾಗಿ ರಚಿಸಲ್ಪಟ್ಟ ಶಾಂತಿನಾಥ ಸ್ವಾಮಿ ವಿಗ್ರಹವನ್ನು ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪ್ರತಿಷ್ಠಾಪಿಸಲಾಯಿತು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಕ್ಷೇತ್ರದ ಗುಡ್ಡದ ಬಸದಿಯಲ್ಲಿ ಪ್ರಾಚೀನ ಕಾಲದ ಬಾಹುಬಲಿ ವಿಗ್ರಹ ಮತ್ತು ನೂತನವಾಗಿ ರಚಿಸಲ್ಪಟ್ಟ ಶಾಂತಿನಾಥ ಸ್ವಾಮಿ ವಿಗ್ರಹವನ್ನು ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪ್ರತಿಷ್ಠಾಪಿಸಲಾಯಿತು.   

ರಿಪ್ಪನ್‌ಪೇಟೆ: ಹೊಂಬುಜ ಅತಿಶಯ ಕ್ಷೇತ್ರದ ಗುಡ್ಡದ ಬಸದಿಯ ಪ್ರಾಚೀನ ಕಾಲದ ಬಾಹುಬಲಿ ವಿಗ್ರಹ ಮತ್ತು ನೂತನವಾಗಿ ರಚಿಸಲ್ಪಟ್ಟ ಶಾಂತಿನಾಥ ಸ್ವಾಮಿ ವಿಗ್ರಹವನ್ನು ಸೋಮವಾರ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.

ಜೈನಾಗಮ ಧಾರ್ಮಿಕ ವಿಧಿ ಪೂರ್ವಕ ತ್ರಿಕೂಟ ಜಿನಾಲಯದಲ್ಲಿ 19 ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿ ವಿಗ್ರಹದ ಎಡ ಭಾಗದಲ್ಲಿ ಶಾಂತಿನಾಥ ಸ್ವಾಮಿ, ಬಲಭಾಗದಲ್ಲಿ ಪ್ರಾಚೀನ ಕಾಲದ ಬಾಹುಬಲಿ ವಿಗ್ರಹವನ್ನು  ಸ್ಥಾಪಿಸಲಾಗಿದೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಧಿಕ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.