ADVERTISEMENT

ಆನ್‌ಲೈನ್‌ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 4:04 IST
Last Updated 11 ಅಕ್ಟೋಬರ್ 2021, 4:04 IST

ಶಿವಮೊಗ್ಗ: ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿ, ವ್ಯಕ್ತಿಯೊಬ್ಬರಿಗೆ ₹ 1.5 ಲಕ್ಷ ವಂಚಿಸಲಾಗಿದೆ.

ಶಿವಮೊಗ್ಗದ ವಿನೋಬನಗರದ ಶಿವಪ್ಪ ನಾಯಕ ಬಡಾವಣೆಯ ನಿವಾಸಿ ಕುಮಾರಸ್ವಾಮಿ ಅವರು ಹಣ ಕಳೆದುಕೊಂಡವರು.

ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಬ್ಯಾಂಕ್ ಮತ್ತು ಡೆಬಿಟ್ ಕಾರ್ಡ್‌ನ ವಿವರಣೆ ನೀಡಿ’ ಎಂದು ಮಾಹಿತಿ ಪಡೆದುಕೊಂಡು ಅವರ ಖಾತೆಯಿಂದ ಒಟ್ಟು ₹ 1.5 ಲಕ್ಷ ಹಣವನ್ನು ಡ್ರಾ
ಮಾಡಿಕೊಂಡಿದ್ದಾರೆ.

ADVERTISEMENT

ಈ ಬಗ್ಗೆ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.