ADVERTISEMENT

ಕೊರೊನಾದಿಂದ ಅಗಲಿದ ಮಹನೀಯರ ಸ್ಮರಣೆ

16 ಮಹನೀಯರಿಗೆ ‘ನುಡಿನಮನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:24 IST
Last Updated 6 ಜುಲೈ 2021, 3:24 IST
ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಹನೀಯರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಚಿಂತಕ ಕಡಿದಾಳ್‌ ದಯಾನಂದ್ ಮಾತನಾಡಿದರು
ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಹನೀಯರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಚಿಂತಕ ಕಡಿದಾಳ್‌ ದಯಾನಂದ್ ಮಾತನಾಡಿದರು   

ತೀರ್ಥಹಳ್ಳಿ: ‘ಕೊರೊನಾ ಸೋಂಕಿನ ಆತಂಕದ ಮಧ್ಯೆ ನಾಡಿನ ಹಲವು ಚಿಂತಕರು, ಸಾಹಿತಿಗಳು, ಹೋರಾಟಗಾರನ್ನು ಕಳೆದುಕೊಂಡಿದ್ದೇವೆ. ಸಮಾಜದ ಅಂಕುಡೊಂಕು ತಿದ್ದಲು ಅವರ ಸಹಕಾರ ಸ್ಮರಣೀಯ’ ಎಂದು ಚಿಂತಕ ಕಡಿದಾಳ್ ದಯಾನಂದ್ ಹೇಳಿದರು.

ಪಟ್ಟಣದ ಕುವೆಂಪು ಸಾರ್ವಜನಿಕ ಗ್ರಂಥಾಲಯ ಸಭಾಂಗಣದಲ್ಲಿ ಈಚೆಗೆ ನಿಧನರಾದ 16 ಮಹನೀಯರಿಗೆ ಹಮ್ಮಿಕೊಂಡಿದ್ದ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾನ್ಯರಂತೆ ಜೀವಿಸಿದ ಮಹನೀಯರ ಕಾರ್ಯ ಸಮಾಜಕ್ಕೆ ಮೇಲ್ಪಂಕ್ತಿ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜದ ಏಳಿಗೆಗಾಗಿ ದುಡಿದವರನ್ನು ಸ್ಮರಿಸಿಕೊಳ್ಳುವುದು ಸಮಾಜದ ಹೊಣೆಗಾರಿಕೆ ಎಂದರು.

ADVERTISEMENT

ಶತಾಯುಷಿ ಎಚ್.ಎಸ್. ದೊರೆಸ್ವಾಮಿ, ಸಾಹಿತಿಗಳಾದ ಡಾ.ಬಿ.ಸಿದ್ದಲಿಂಗಯ್ಯ, ಜರಗನ ಹಳ್ಳಿಶಿವಶಂಕರ್, ಕೊ.ವೆಂ. ರಾಮಕೃಷ್ಣಗೌಡ, ಜಿ. ವೆಂಕಟಸುಬ್ಬಯ್ಯ, ಹೋರಾಟಗಾರರಾದ ವಿಠಲ ಭಂಡಾರಿ, ಈಸೂರು ಬಸವರಾಜ್, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಯಾಗಿದ್ದ ಎಚ್.ಎಂ. ಮಹೇಶ್ವರಯ್ಯ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ಡೊಡ್ಡೇರಿ, ಚಿತ್ರನಟ ಸಂಚಾರಿ ವಿಜಯ್, ಸಂಘಟಕ ಕ.ರಾ. ಕೃಷ್ಣಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಟ್ಯಾಗೋರ್, ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ, ಪಂಚಾಯತ್‌ ರಾಜ್ ವಿಭಾಗದ ಪೀತಾಂಬರಗೌಡ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಲೇಖಕ ಡಾ.ಜೆ.ಕೆ. ರಮೇಶ್, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಲಿಗೆ ನಾಗರಾಜ್, ತಾಲ್ಲೂಕು ವರ್ತಕರ ಸಂಘದ ಕಾರ್ಯದರ್ಶಿ ಡಾನ್‌ ರಾಮಣ್ಣ, ಲೇಖಕ ಜೆ.ಕೆ.ಸತೀಶ್, ಉಪನ್ಯಾಸಕ ಡಾ.ಬಿ.ಗಣಪತಿ, ನಿವೃತ್ತ ಉಪನ್ಯಾಸಕಿ ಉಮಾದೇವಿ ಉರಾಳ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.