ADVERTISEMENT

ಶಿವಮೊಗ್ಗ: ರೈಲಿನಡಿ ಬಿದ್ದು ಅಥ್ಲೆಟಿಕ್ಸ್ ಕೋಚ್ ಎಂ.ಜಿ.ವಿಶ್ವನಾಥ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 10:01 IST
Last Updated 25 ಜುಲೈ 2023, 10:01 IST
   

ಶಿವಮೊಗ್ಗ: ಇಲ್ಲಿನ ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಎಂ.ಜೆ.ವಿಶ್ವನಾಥ್ (70) ಮಂಗಳವಾರ ಬೆಳಿಗ್ಗೆ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಶಿವಮೊಗ್ಗದ ವಿನೋಬ ನಗರದ ಬಳಿ ಬೆಳಿಗ್ಗೆ ಶಿವಮೊಗ್ಗ-ತಾಳಗುಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವನಾಥ್ 2012ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದು, ಮಗನ ಮನೆಗೆ ತೆರಳಿದ್ದ ಅವರು ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದರು ಎಂದು ತಿಳಿದುಬಂದಿದೆ. ಸೋಮವಾರ ತಮ್ಮ ಸಹೋದರಿಗೆ ಕರೆ ಮಾಡಿದ್ದ ಅವರು ಯಾವುದೂ ಸರಿ ಇಲ್ಲ. ನಿಮ್ಮ ಬಳಿ ಬಂದು ಮಾತನಾಡಬೇಕು ಎಂದು ಹೇಳಿದ್ದರು ಎನ್ನಲಾಗಿದೆ.

ADVERTISEMENT

ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನ ಮೆಗ್ಗಾನ್ ಗೆ ಶವಪರೀಕ್ಷೆ ಕೇಂದ್ರಕ್ಕೆ ಸಾಗಿಸಲಾಗಿದೆ.

ಅಥ್ಲೆಟಿಕ್ಸ್ ಕೋಚ್: ಡಾ.ಎಂ.ಜೆ.ವಿಶ್ವನಾಥ್ ಶಿವಮೊಗ್ಗದ ಅಥ್ಲೆಟಿಕ್ಸ್ ವಲಯದಲ್ಲೂ ಕೋಚ್ ಆಗಿ ಛಾಪು ಮೂಡಿಸಿದ್ದರು. ಅವರ ಬಳಿ ತರಬೇತಿ ಪಡೆದ ನೂರಾರು ಅಥ್ಲಿಟ್ ಗಳು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.