ADVERTISEMENT

ಭದ್ರಾವತಿ: ಅದ್ದೂರಿ ದಸರಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:44 IST
Last Updated 16 ಅಕ್ಟೋಬರ್ 2021, 4:44 IST
ಶಾಸಕ ಬಿ.ಕೆ. ಸಂಗಮೇಶ್ವರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು
ಶಾಸಕ ಬಿ.ಕೆ. ಸಂಗಮೇಶ್ವರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು   

ಭದ್ರಾವತಿ: 50ಕ್ಕೂ ಅಧಿಕ ದೇವರ ಉತ್ಸವ ಮೂರ್ತಿಗಳ ಸಾಲು. ಇದಕ್ಕೆ ಮೆರುಗು ತಂದ ಡೊಳ್ಳು, ವೀರಗಾಸೆ, ನಾದಸ್ವರ ಹಾಗೂ ಕಲಾತಂಡಗಳು.

ನಗರದಲ್ಲಿ ಶುಕ್ರವಾರ ನಡೆದ ದಸರಾ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯ ಇದು. ಶಾಸಕ ಬಿ.ಕೆ.ಸಂಗಮೇಶ್ವರ ನಂದಿಧ್ವಜಕ್ಕೆ ಪೂಜೆ ಮಾಡುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಬನ್ನಿ ಮುಡಿಯುವ ಕಾರ್ಯಕ್ರಮವನ್ನು ತಹಶೀಲ್ದಾರ್ ಪ್ರದೀಪ್ ನಡೆಸಿಕೊಟ್ಟರು. ಪೌರಾಯುಕ್ತ ಪರಮೇಶ್ವರ, ಉಪವಿಭಾಗಾಧಿಕಾರಿ ಪ್ರಕಾಶ್, ರೆವಿನ್ಯೂ ಅಧಿಕಾರಿ ರಾಜಕುಮಾರ್, ನಗರಸಭೆ ಸದಸ್ಯೆ ಶಕುಂತಲಾ, ವಿಶಾಲಾಕ್ಷಿ, ರಮಾಕಾಂತ, ರಾಮಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.