ADVERTISEMENT

‘ಬಿದನೂರು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಅಗತ್ಯ’

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:51 IST
Last Updated 21 ಡಿಸೆಂಬರ್ 2025, 6:51 IST
ಹೊಸನಗರ ತಾಲ್ಲೂಕು ದೇವಗಂಗೆ ಆವರಣದಲ್ಲಿ ನಡೆದ ಎಳ್ಳಮವಾಸ್ಯೆ ಹಬ್ಬದಾಚರಣೆ ಕಾರ್ಯಕ್ರಮ ನಡೆಯಿತು.
ಹೊಸನಗರ ತಾಲ್ಲೂಕು ದೇವಗಂಗೆ ಆವರಣದಲ್ಲಿ ನಡೆದ ಎಳ್ಳಮವಾಸ್ಯೆ ಹಬ್ಬದಾಚರಣೆ ಕಾರ್ಯಕ್ರಮ ನಡೆಯಿತು.   

ಹೊಸನಗರ: ಸುತ್ತಲೂ ಮುಳುಗಡೆ, ಕಾಡು, ಅಭಯಾರಣ್ಯ ಮತ್ತಿತರ ಕಾರಣದಿಂದ ಅಭಿವೃದ್ಧಿ ಕುಂಟಿತವಾದ ನಗರ ಹೋಬಳಿಗೆ ಪ್ರವಾಸೋದ್ಯಮ ಮಾತ್ರ ಆಧಾರವಾಗಿದೆ. ಅದೇ ನಮಗಿರುವ ಭರವಸೆಯಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವಗಂಗೆ ಕೊಳದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಎಳ್ಳಮವಾಸ್ಯೆ ಹಬ್ಬದ ಆಚರಣೆ‌ಯಲ್ಲಿ ಮಾತನಾಡಿದರು.

ಇಲ್ಲಿ ದೇವಗಂಗೆ, ಕೋಟೆ, ಕೊಡಚಾದ್ರಿ, ಹುಲಿಕಲ್ ಸೇರಿದಂತೆ ಹಲವು ಪ್ರಸಿದ್ಧ ಐತಿಹಾಸಿಕ ಪ್ರಾಕೃತಿಕ ತಾಣಗಳಿವೆ. ಪ್ರವಾಸಿ ಹಬ್ ಮಾಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದರು.

ADVERTISEMENT

ನಾಡಿನ ಬೆಳಕಿಗಾಗಿ ಇಲ್ಲಿಯ ಜನ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ರೈತರ ಸಮೃದ್ಧ ಭೂಮಿ‌, ಬದುಕು ಮುಳುಗಡೆಯಾಗಿದೆ. ಯಾವುದೇ ಉದ್ಯೋಗವಕಾಶ ಇಲ್ಲವಾಗಿದೆ. ನಾಡಿಗೆ ಕೊಡುಗೆ ನೀಡಿ ಬಸವಳಿದ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಬಿದನೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯ ಎಂದು ಪ್ರತಿಪಾಧಿಸಿದರು.

ಬೆಳಿಗ್ಗೆ ತೀರ್ಥ ಸ್ನಾನ, ಮಹಾಪೂಜೆ, ಅನ್ನ ಸಂತರ್ಪಣೆ, ಯಕ್ಷಗಾನ ಕಾರ್ಯಕ್ರಮ ನಡೆಯಿತು. ಬೆಳಕಿನ ದೃಶ್ಯ ವೈಭವಕ್ಕೆ ಮನಸೋತ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದರು. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಬೆಳಕಿನ ದೃಶ್ಯವೈಭವಕ್ಕೆ ಮಾರು ಹೋಗಿ ಸೆಲ್ಫೀ ತೆಗೆದುಕೊಳ್ಳುವುದು ಮಾಮೂಲಿಯಾಗಿತ್ತು.

ವಿಶೇಷವಾಗಿ ಮಕ್ಕಳ ಸಂಭ್ರಮ ಕಂಡುಬಂದಿತು. ಇಡೀ ಕಾರ್ಯಕ್ರಮದ ಯಶಸ್ಸಿಗೆ ದೇವಗಂಗೆ, ಇಂದ್ರೋಡಿ, ಶ್ರೀಧರಪುರ, ಬಸವನಬ್ಯಾಣ, ಬಿದನೂರು ಭಾಗದ ಜನರ ಶ್ರಮ ಕಾರಣವಾಗಿದೆ.

ಹೊಸನಗರ ತಾಲ್ಲೂಕಿನ ದೇವಗಂಗೆ ಆವರಣದಲ್ಲಿ ನಡೆದ ಎಳ್ಳಮವಾಸ್ಯೆ ಹಬ್ಬದಾಚರಣೆ ವೇಳೆ ವಿಶೇಷ ಬೆಳಕಿನ ದೃಶ್ಯ ವೈಭವ ನಡೆಯಿತು
ಹೊಸನಗರ ತಾಲ್ಲೂಕು ದೇವಗಂಗೆ ಆವರಣದಲ್ಲಿ ನಡೆದ ಎಳ್ಳಮವಾಸ್ಯೆ ಹಬ್ಬದಾಚರಣೆ ವೇಳೆ ವಿಶೇಷ ಬೆಳಕಿನ ದೃಶ್ಯ ವೈಭವ ಮುಖಮಂಟಪ ಗಮನ ಸೆಳೆಯಿತು

ದೇವಗಂಗೆ ದೃಶ್ಯ ವೈಭವ

ದೇವಗಂಗೆಯಲ್ಲಿ ಈ ಬಾರಿಯ ಎಳ್ಳಮವಾಸ್ಯೆಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪ್ರಥಮ ಬಾರಿಗೆ ದೇವಗಂಗೆ ಕೊಳದಲ್ಲಿ ಉತ್ತರದ ಕಾಶಿಯಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮ ನಡೆದಿದ್ದು ಭಕ್ತರ ಗಮನ ಸೆಳೆಯಿತು. ಈ ವೇಳೆ ಭಕ್ತರು ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು. ಭಕ್ತರ ವೇದವಾಕ್ಯದ ಎಲ್ಲೆಡೆ ಮಾರ್ಧನಿಸಿತು. ಸಂಜೆ ದೇವಗಂಗೆ ಗಂಗಾಧರೇಶ್ವರ ಸನ್ನಿಧಿ ಕೊಳದ ಆವರಣದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಬೆಳಕಿನ ದೃಶ್ಯವೈಭವ ಅದ್ಭುತವಾಗಿ ಮೂಡಿ ಬಂದಿತು. ಬೆಳಕಿನ ವಿವಿಧ ಚಿತ್ರ ಚಿತ್ತಾರವು ಸೇರಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.