ADVERTISEMENT

ಪ್ರವಾಸೋದ್ಯಮ ತಾಣವಾಗಿ ಗೋಂದಿ: ಪವಿತ್ರಾ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 12:41 IST
Last Updated 27 ಅಕ್ಟೋಬರ್ 2020, 12:41 IST
ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಂಗಳವಾರ ಗೋಂದಿ ಅಣೆಕಟ್ಟೆ ವೀಕ್ಷಿಸಿದರು.
ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಂಗಳವಾರ ಗೋಂದಿ ಅಣೆಕಟ್ಟೆ ವೀಕ್ಷಿಸಿದರು.   

ಶಿವಮೊಗ್ಗ: ಗೊಂದಿ ನಾಲೆಅಣೆಕಟ್ಟು ಪ್ರದೇಶವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭದ್ರಾ ‘ಕಾಡಾ’ ಅಧ್ಯಕ್ಷೆ ಪವಿತ್ರ‍್ರಾ ರಾಮಯ್ಯಹೇಳಿದರು.

ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗೊಂದಿಬಳಿಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಗೊಂದಿ ಅಣೆಕಟ್ಟೆ ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಗೊಂದಿ ನಾಲೆಅಣೆಕಟ್ಟೆಅಭಿವೃದ್ಧಿಪಡಿಸಿದರೆಈ ಭಾಗದಲ್ಲಿ ಪ್ರವಾಸೋದ್ಯಮಬಲಗೊಳ್ಳುತ್ತದೆ. ನೂರಾರು ಜನರ ನಿತ್ಯ ಜೀವನಕ್ಕೆ ಅನುಕೂಲವಾಗುತ್ತದೆ. ಳೀಯ ಆಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ಆದಾಯ ಬರುತ್ತದೆಎಂದರು.

ADVERTISEMENT

ಅಣೆಕಟ್ಟೆಯನ್ನು ಉನ್ನತೀಕರಿಸಿದರೆಸುತ್ತಲಿರುವ ಹನ್ನೊಂದು ನೀರು ಬಳಕೆದಾರರ ಸಹಕಾರ ಸಂಘಗಳಿಗೆ, ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಈ ಕುರಿತು ಮುಖ್ಯಮಂತ್ರಿ, ಸಂಸದರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗುವುದುಎಂದು ಭರವಸೆ ನೀಡಿದರು.

‘ಕಾಡಾ’ ನಿರ್ದೇಶಕ ಷಡಾಕ್ಷರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.