ADVERTISEMENT

ಗೋವಿಂದ್‌ ಕೊಲೆಯ ಪ್ರಮುಖ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 11:34 IST
Last Updated 18 ಜೂನ್ 2019, 11:34 IST

ಶಿವಮೊಗ್ಗ: ರೌಡಿಶೀಟರ್ ಗೋವಿಂದ್‌ಕೊಲೆ ಪ್ರಕರಣದ ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ರೌಡಿಶೀಟರ್ ಖರಾಬ್ ಶಿವು (ಎಸ್.ಕೆ. ಸೀತಾರಾಮ್), ಆತನ ಸಹೋದರರಾದ ನಾಗಿ (ಎಸ್.ಕೆ. ನಾಗರಾಜ್), ಸುಬ್ಬು (ಎಸ್.ಕೆ. ಸುಬ್ರಮಣಿ) ಬಂಧಿತ ಆರೋಪಿಗಳು.

ಎರಡು ಕುಟುಂಬಗಳ ನಡುವಿನ ದ್ವೇಷದ ಕಾರಣ ಪ್ರಸಕ್ತ ವರ್ಷದ ಜನವರಿ 30ರಂದು ಗಾರ್ಡನ್ ಏರಿಯಾ 2ನೇ ಕ್ರಾಸ್‌ನಲ್ಲಿ ಗೋವಿಂದ ಲಕ್ಷ್ಮೀನಾರಾಯಣನ ಹತ್ಯೆ ನಡೆದಿತ್ತು. ಪ್ರಕರಣ ನಡೆದ ನಂತರ ಆರೋಪಿಗಳಾದ ಚೇತನ್, ಸಂಜಯ್, ಮಂಜುನಾಥ್, ರಿಜ್ವಾನ್, ಸಂದೇಶ್, ಪ್ರೇಮರಾಜ್, ಶಿವರಾಜ್, ಲಕ್ಷ್ಮಮ್ಮ ಅವರನ್ನುಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಬೆಂಗಳೂರಿನಲ್ಲಿ ಮಗನನ್ನ ಶಾಲೆಗೆ ಸೇರಿಸಲು ಬಂದಾಗ ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ಕುಮಾರ್, ಜಯನಗರ ಠಾಣೆ ಪಿಎಸ್ಐ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡ ಬಂಧಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.