ADVERTISEMENT

ಶವ ಸಾಗಿಸುತ್ತಿದ್ದ ಆಂಬುಲೆನ್ಸ್‌ ಪಲ್ಟಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:14 IST
Last Updated 2 ಆಗಸ್ಟ್ 2022, 2:14 IST
ಆಗುಂಬೆ ಸಮೀಪದ ನೇರಲಕೊಡಿಗೆ ಗ್ರಾಮದ ಬಳಿ ಆಂಬುಲೆನ್ಸ್ ಪಲ್ಟಿಯಾಗಿದೆ.
ಆಗುಂಬೆ ಸಮೀಪದ ನೇರಲಕೊಡಿಗೆ ಗ್ರಾಮದ ಬಳಿ ಆಂಬುಲೆನ್ಸ್ ಪಲ್ಟಿಯಾಗಿದೆ.   

ತೀರ್ಥಹಳ್ಳಿ: ಆಗುಂಬೆ ಸಮೀಪದ ನೇರಲಕೊಡಿಗೆ ಗ್ರಾಮದ ಸಮೀಪ ಸೋಮವಾರ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭಾವೀಕೆರೆ ನಿವಾಸಿ ರಾಮನಾಯ್ಕ (68) ಅವರು ಮಂಗಳೂರಿನ ವೆನ್‌ಲಾಕ್‌
ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಮೃತದೇಹ ಸಾಗಿಸುತ್ತಿದ್ದಾಗ ಘಟನೆ ನಡೆದಿದೆ.

ಆಂಬುಲೆನ್ಸ್‌ನಲ್ಲಿದ್ದ ರಾಮಾನಾಯ್ಕ ಅವರ ಮಗಳು, ಸಂಬಂಧಿಕರು ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.