ಭದ್ರಾವತಿ: ಮನೆ ಮುಂದಿನ ಚಾನಲ್ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ತಂದೆ ಮತ್ತು ಮಗ ಚಾನಲ್ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಮಾವಿನಕೆರೆ ಕಾಲೊನಿ ನಿವಾಸಿ ಮೊಹಮ್ಮದ್ ಅಶಂ (67), ಮೊಹಮ್ಮದ್ ಸನಾವುಲ್ಲಾ (30) ಸಾವನ್ನಪ್ಪಿದವರು. ಬುಧವಾರ ಸಂಜೆ ತಂದೆ ಮಗ ಇಬ್ಬರು ಚಾನಲ್ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ನೀರಿಗೆ ಬಿದ್ದಿದ್ದು ಇದನ್ನು ನೋಡಿದ ಜನರು ಮಾಹಿತಿ ನೀಡಿದ ಆಧಾರದ ಮೇಲೆ ಇವರಿಬ್ಬರ ಹುಡಕಾಟ ನಡೆದಿದೆ.
ತಂದೆ ಮಹಮದ್ ಅಶಂ ಶವ ಸಮೀಪದಲ್ಲೇ ಸಿಕ್ಕಿದ್ದು ಮಗ ಸನಾವುಲ್ಲಾ ಶವ ಹೆಂಚಿನ ಸಿದ್ದಾಪುರ ಗ್ರಾಮದ ಬಳಿ ಸಿಕ್ಕಿದೆ. ಘಟನೆ ವೇಳೆ ತಂದೆ ಮಗ ಮಾತ್ರ ಇದ್ದು ಇನ್ನೊಬ್ಬ ಮಗ ಜಬೀವುಲ್ಲಾ ಮತ್ತು ಆತನ ಹೆಂಡತಿ ಶಿವಮೊಗ್ಗಕ್ಕೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಮಹಮದ್ ಜಬೀವುಲ್ಲಾ ಘಟನೆ ಸಂಬಂಧ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.