ADVERTISEMENT

ಎಣ್ಣೆಕೊಪ್ಪ: ಚಿರತೆ ದಾಳಿಯಿಂದ ಯಜಮಾನನನ್ನು ಕಾಪಾಡಿದ ಶ್ವಾನಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 6:25 IST
Last Updated 10 ಏಪ್ರಿಲ್ 2022, 6:25 IST
ಬಂಗಾರಪ್ಪ
ಬಂಗಾರಪ್ಪ   

ಆನವಟ್ಟಿ: ಸಮೀಪದ ಎಣ್ಣೆಕೊಪ್ಪ ಗೊಲ್ಲರ ತಾಂಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದ್ದು, ಸಾಕುನಾಯಿಗಳು ಚಿರತೆಯನ್ನು ಓಡಿಸಿ ಪ್ರಾಣಾಪಾಯದಿಂದ ಪಾರುಮಾಡಿವೆ.

ಬಂಗಾರಪ್ಪ ಅವರು ಶನಿವಾರ ಬೆಳಿಗ್ಗೆ ಕಟ್ಟಿಗೆ ತರಲು ಕಾಡಿಗೆ ಹೋದಾಗ ಚಿರತೆ ದಾಳಿ ಮಾಡಿದ್ದು, ಕೈಗೆ ಗಾಯವಾಗಿದೆ. ಇದನ್ನು ಕಂಡ ಅವರ ಎರಡು ಸಾಕು ನಾಯಿಗಳು ತಕ್ಷಣಚಿರತೆ ಮೇಲೆ ಪ್ರತಿ ದಾಳಿ ಮಾಡಿ ಚಿರತೆಯನ್ನು ಓಡಿಸಿವೆ. ಬಂಗಾರಪ್ಪ ಅವರನ್ನು ಶಿಕಾರಿಪುರದಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT