ADVERTISEMENT

ಸಕ್ರೆಬೈಲು ಶಿಬಿರದ ಆನೆಗಳಿಗೆ ಗಾಯ: ವರದಿಗೆ ಖಂಡ್ರೆ ಸೂಚನೆ

-

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:01 IST
Last Updated 22 ಅಕ್ಟೋಬರ್ 2025, 6:01 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

– ‍ಪ್ರಜಾವಾಣಿ ಚಿತ್ರ

ಶಿವಮೊಗ್ಗ: ಶಿವಮೊಗ್ಗ ದಸರಾದಲ್ಲಿ ಪಾಲ್ಗೊಂಡಿದ್ದ ಆನೆ ಬಾಲಣ್ಣ ಸೇರಿದಂತೆ ಇಲ್ಲಿನ ಸಕ್ರೆಬೈಲು ಶಿಬಿರದ ನಾಲ್ಕು ಆನೆಗಳು ಕಾಡಾನೆ ದಾಳಿ ಹಾಗೂ ಚುಚ್ಚುಮದ್ದು ನೀಡುವಾಗ ಆದ ತಪ್ಪಿನಿಂದ ಗಾಯಗೊಂಡಿರುವುದನ್ನು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ವಾರದೊಳಗೆ ವರದಿ ನೀಡುವಂತೆ ಸೂಚಿಸಿ ಪತ್ರ ಬರೆದಿದ್ದಾರೆ.

ADVERTISEMENT

ಚುಚ್ಚುಮದ್ದು ನೀಡುವಾಗ ಪ್ರಮಾದ ಆಗಿದ್ದರೆ ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಕ್ರೆಬೈಲು ಆನೆ ಶಿಬಿರಕ್ಕೆ ಗುತ್ತಿಗೆ ಇಲ್ಲವೇ ನಿಯೋಜನೆ ಮೇಲೆ ವೈದ್ಯರ ನೇಮಕ ಮಾಡಿಕೊಳ್ಳುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.