ADVERTISEMENT

ರೈತರ ಬಂಧನಕ್ಕೆ ರೈತ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 15:29 IST
Last Updated 2 ಜನವರಿ 2020, 15:29 IST
ಎಚ್‌.ಆರ್.ಬಸವರಾಜಪ್ಪ
ಎಚ್‌.ಆರ್.ಬಸವರಾಜಪ್ಪ   

ಶಿವಮೊಗ್ಗ: ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ರೈಲುನಿಲ್ದಾಣದಲ್ಲೇ ಬಂಧಿಸಿದಕ್ರಮಕ್ಕೆ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಅವರ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಚಳವಳಿ ಹತ್ತಿಕ್ಕುವ ಕೇಂದ್ರ, ರಾಜ್ಯ ಸರ್ಕಾರಗಳ ಸರ್ವಾಧಿಕಾರಿ ಧೋರಣೆಎಂದು ರೈತ ಸಂಘದ ಗೌರವಾಧ್ಯಕ್ಷಎಚ್.ಆರ್. ಬಸವರಾಜಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಮ್ಮ ಹಕ್ಕು.ರೈತರು ಭಯೋತ್ಪಾದಕರಲ್ಲ. ಬೆಂಕಿ ಹಚ್ಚುತ್ತಿರಲಿಲ್ಲ, ಹಿಂಸೆ ರೈತ ಸಮುದಾಯದ ಉದ್ದೇಶವೂ ಅಲ್ಲ. ರೈತ ಸಂಘ ಗಾಂಧಿ ತತ್ವದ ಮೇಲೆ ರಚಿತವಾಗಿದೆ. ಇಂತಹ ಸಂಘದ ಸದಸ್ಯರನ್ನು ಮನೆ, ರೈಲುನಿಲ್ದಾಣ, ವಾಹನ ತಡೆದು ಬಂಧಿಸಿರುವುದು ಖಂಡನೀಯ ಎಂದರು.

ADVERTISEMENT

8ಕ್ಕೆ ಗ್ರಾಮೀಣ ಕರ್ನಾಟಕ ಬಂದ್:ರೈತರ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಜ.8ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಭಾರತ್ ಬಂದ್‌ಗೆ ಕರೆ ನೀಡಿದೆ. ಇದರ ಅಡಿಯಲ್ಲಿಯೇ ಗ್ರಾಮೀಣಕರ್ನಾಟಕ ಬಂದ್ನ ಡೆಯಲಿದೆ.ಅಂದು ಹಳ್ಳಿಗಳಲ್ಲಿ ರೈತರು ಸೇರಿ ರೈತವಿರೋಧಿಸರ್ಕಾರಗಳ ವಿರುದ್ಧಪ್ರತಿಭಟನೆ ನಡೆಸುವರು. ಹಳ್ಳಿಯಿಂದ ನಗರಕ್ಕೆ ತರಕಾರಿ, ಧಾನ್ಯ, ಹಾಲು ಉತ್ಪನ್ನಗಳ ಮಾರಾಟಮಾಡಲೂ ಹೋಗುವುದಿಲ್ಲ. ಇದು ಗ್ರಾಮೀಣ ರೈತರೇ ಮಾಡುವ ಬಂದ್ಎಂದು ಮಾಹಿತಿ ನೀಡಿದರು.

ರಾಜ್ಯದ ರೈತ ಸಂಘಗಳೂ ಸೇರಿ200ಕ್ಕೂ ಹೆಚ್ಚು ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥ್ ವರದಿ ಜಾರಿ, ರಾಜ್ಯದ ಪ್ರವಾಹಪೀಡಿತರಿಗೆ ಸೂಕ್ತ ಪರಿಹಾರ, ಬಗರ್‌ಹುಕುಂ ಸಕ್ರಮ, ಭೂ ಸುಧಾರಣಾ ತಿದ್ದುಪಡಿ ಕೈಬಿಡಲು ಆಗ್ರಹಿಸಲಾಗುವುದು ಎಂದರು.

ಜ.4ರಂದು ಪೌರತ್ವ ಕಾಯ್ದೆ ಕುರಿತು ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಒಂದು ದಿನದ ವಿಚಾರ ಸಂಕಿರಣಹಮ್ಮಿಕೊಳ್ಳಲಾಗಿದೆ.ಪರ ಮತ್ತು ವಿರೋಧವಾಗಿ ಮಾತನಾಡುವವರು ಸಭೆಯಲ್ಲಿ ಹಾಜರಿರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಚಿಕ್ಕಸ್ವಾಮಿ, ಹಿಟ್ಟೂರು ರಾಜು, ರಾಮಚಂದ್ರ, ಟಿ.ಎಂ.ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.