ADVERTISEMENT

ಸುಟ್ಟ ಕಾರಿನ ಮಾಲೀಕರ ಗುರುತು ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:43 IST
Last Updated 1 ಅಕ್ಟೋಬರ್ 2021, 4:43 IST

ಆನಂದಪುರ: ತೀರ್ಥಹಳ್ಳಿ ತಾಲ್ಲೂಕಿನ ಮಿಟ್ಲುಗೋಡು ಸಮೀಪದ ದಟ್ಟ ಅರಣ್ಯದಲ್ಲಿ ಸುಟ್ಟ ಕಾರು ಆನಂದಪುರ ಸಮೀಪದ ಚನ್ನಕೊಪ್ಪದ ವಿನೋದ್ ಕುಮಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿ ಯಾರು ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿನೋದ್ ಕುಮಾರ್ 4 ದಿನಗಳಿಂದ ಮನೆಗೆ ಬಂದಿರಲಿಲ್ಲ. ಅವರು ಹರ್ಬಲ್ ಲೈಫ್ ಆಯುರ್ವೇದಿಕ್ ಔಷಧಗಳ ವ್ಯವಹಾರ ಮಾಡುತ್ತಿದ್ದರು. ಔಷಧಗಳ ವ್ಯವಹಾರಕ್ಕಾಗಿ ಹೋಗಿರಬೇಕು ಎಂದು ತಿಳಿದುಕೊಂಡಿದ್ದೆವು. ಕೆಲವು ವೇಳೆ ಮೂರು ದಿನಗಳಾದರೂ ಮನೆಗೆ ಬರುತ್ತಿರಲಿಲ್ಲ. ಹಾಗಾಗಿ ಸುಮ್ಮನಿದ್ದೆವು. ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಟ್ಟ ಕಾರಿನ ಫೋಟೊ ಬಂದಾಗ ವಿನೋದ್ ಕಾರು ಎಂದು ತಿಳಿಯಿತು’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದರು.

ADVERTISEMENT

ಕುಟುಂಬ ಸದಸ್ಯರ ರಕ್ತದ ಮಾದರಿ ನೀಡಲಾಗಿದೆ. ವಿನೋದ್ ಕುಮಾರ್ ಅವರ ಪುತ್ರನನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.