ಶಿವಮೊಗ್ಗ: ಮಠಾಧೀಶರು ಸೇರಿದಂತೆ ಯಾರೇ ಆದರೂತಮ್ಮ ಸಮುದಾಯದ ಶಾಸಕರಿಗೆ ಮಂತ್ರಿಗಿರಿ ಕೇಳುವುದು ತಪ್ಪಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪವಚನಾನಂದ ಸ್ವಾಮೀಜಿ ಅವರ ಮಾತನ್ನುಸಮರ್ಥಿಸಿಕೊಂಡರು.
ನಗರದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಸಮುದಾಯದ ಪರವಾಗಿ ವಚನಾನಂದ ಸ್ವಾಮೀಜಿಧ್ವನಿ ಎತ್ತಿದ್ದಾರೆ.ಆದರೆ, ಕೆಲವರು ಇದನ್ನೇ ದೊಡ್ಡದು ಮಾಡಿರಾಜಕಾರಣಮಾಡುತ್ತಿದ್ದಾರೆ. ವಿಷಯಇಲ್ಲಿಗೆ ಮುಗಿಸಬೇಕು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರೂ ಶ್ರೀಗಳ ಹೇಳಿಕೆ ಬೆಳೆಸಬಾರದು ಎಂದು ಮನವಿ ಮಾಡಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆಕುರಿತು ಪ್ರಧಾನಿ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಪೌರತ್ವ ಕಾಯ್ದೆ ಪರ–ವಿರೋಧದ ಮೂಲಕದೇಶದ್ರೋಹಿಗಳು ಯಾರು? ದೇಶಭಕ್ತರು ಯಾರು ಎಂದು ಗೊತ್ತಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.