ADVERTISEMENT

‘ಆಶಾ‌ ಕಾರ್ಯಕರ್ತರಿಗೆ ಹಣ ಕೊಡಲು ರೈತರ ಖಜಾನೆಗೆ ಕೈ ಹಾಕಿದ ಬಿಜೆಪಿ‌ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 7:40 IST
Last Updated 9 ಜುಲೈ 2020, 7:40 IST
ಕಿಮ್ಮನೆ ರತ್ನಾಕರ್‌
ಕಿಮ್ಮನೆ ರತ್ನಾಕರ್‌   

ಶಿವಮೊಗ್ಗ: ಅತ್ತೆಯ ಹಣವನ್ನು ಸೊಸೆ ದಾನ ಮಾಡಿದಂತೆ ಬಿಜೆಪಿ‌ ಸರ್ಕಾರ ಆಶಾ‌ ಕಾರ್ಯಕರ್ತರಿಗೆ ಹಣ ಕೊಡಲು ರೈತರ ಖಜಾನೆಗೆ ಕೈ ಹಾಕಿದೆ ಎಂದು ಮಾಜಿ‌ ಸಚಿವ ಕಿಮ್ಮನೆ ರತ್ನಾಕರ್‌ ಕುಟುಕಿದರು.

ಕೊರೊನಾ‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆ ಹಿತ ಕಾಯಬೇಕಾದದ್ದು, ಸರ್ಕಾರದ ಜವಬ್ದಾರಿ. ಆದರೆ, ಈ ಜವಬ್ದಾರಿಯನ್ನು ಸೊಸೈಟಿ ಗಳಿಗೆ ವಹಿಸಿ, ಆಶಾ ಕಾರ್ಯಕರ್ತೆ ಯರಿಗೆ ದಾನ‌ ನಿಡುವಂತೆ ಸರ್ಕಾರ ನಿರ್ದೇಶನ ನೀಡಿರುವುದು. ಬಿಜೆಪಿಗೆ ಆಡಳಿತ ನಡೆಸಲು ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.

ಕೋವಿಡ್ ನಿಯಂತ್ರಣ ಸಾಮಗ್ರಿ ಖರೀದಿ ಅವ್ಯವಹಾರದ ಸಮಗ್ರ ತನಿಗೆಗೆ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.