ಶಿವಮೊಗ್ಗ: ಬಿಜೆಪಿ ಅಭೂತಪೂರ್ವ ಗೆಲುವು ಪಡೆದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮೇ 30ರಂದು ಶಿವಮೊಗ್ಗ ನಗರದ ಜನರಿಗೆ ಸಿಹಿ ವಿತರಿಸಲು ಒಂದು ಲಕ್ಷ ಲಾಡು ಸಿದ್ಧವಾಗಿವೆ.
ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ಲಾಡು ತಯಾರು ಮಾಡಲಾಗಿದೆ. ಸುಮಾರು 150 ಬಾಣಸಿಗರು 4 ದಿನಗಳಿಂದ ಲಾಡು ತಯಾರಿಗೆ ಶ್ರಮಿಸಿದ್ದಾರೆ.
ಈ ಬಾರಿ ಬಿಜೆಪಿಗೆ ಎಲ್ಲ ಧರ್ಮ, ಜಾತಿಯ ಜನರೂ ಬೆಂಬಲ ನೀಡಿದ್ದಾರೆ. ಮೋದಿ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಇಡೀ ಜಗತ್ತು ಸಂಭ್ರಮಿಸುತ್ತಿದೆ. ವಿಶ್ವದ ಬಹುತೇಕ ಗಣ್ಯರು ಆ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಈ ಸಂತೋಷ ಹಂಚಿಕೊಳ್ಳಲು ಅಂದು ಬೆಳಿಗ್ಗೆ 10ಕ್ಕೆ ನಗರದ ಎಲ್ಲ ಮನೆಗಳಿಗೂ ಪಕ್ಷದ ಕಾರ್ಯಕರ್ತರು ಲಾಡು ತಲುಪಿಸಲಿದ್ದಾರೆ.ಪ್ರಮುಖ ರಸ್ತೆಗಳ ಅಂಗಡಿ, ಕಚೇರಿಗಳಲ್ಲೂ ಹಂಚಲಾಗುವುದು ಎಂದು ಶಾಸಕ ಈಶ್ವರಪ್ಪ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.