ADVERTISEMENT

ಜಮೀನು ಮಾರಾಟ ವಹಿವಾಟು: ಕಾಂಗ್ರೆಸ್ ಮುಖಂಡರಿಂದ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 16:19 IST
Last Updated 30 ಡಿಸೆಂಬರ್ 2024, 16:19 IST

ಸಾಗರ: ತಾಲ್ಲೂಕಿನ ಸಂಪಳ್ಳಿ ಗ್ರಾಮದ ಸ.ನಂ.31 ಹಾಗೂ 32ರಲ್ಲಿ ಜಮೀನಿನ ವಹಿವಾಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಲ್ಯಾವಿಗೆರೆ ಹಾಗೂ ಸಣ್ಣಕ್ಕಿ ಮಂಜು ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಪಳ್ಳಿ ಗ್ರಾಮಸ್ಥರಾದ ಸತ್ಯಪ್ಪ, ಶ್ರೀಧರ್ ಸಹೋದರರು ಆರೋಪಿಸಿದ್ದಾರೆ.

‘ಜಮೀನಿನ ವಹಿವಾಟಿನ ಸಂದರ್ಭದಲ್ಲಿ ₹ 10 ಲಕ್ಷ ನೀಡುವುದಾಗಿ ವಾಗ್ದಾನ ನೀಡಿದ್ದ ಸೋಮಶೇಖರ್ ಹಾಗೂ ಸಣ್ಣಕ್ಕಿ ಮಂಜು ನಂತರ ಆ ಪ್ರಕಾರ ನಡೆದುಕೊಂಡಿಲ್ಲ. ಈ ಬಗ್ಗೆ ಕೇಳಿದಾಗ ತಮ್ಮ ರಾಜಕೀಯ ಪ್ರಭಾವ ಬಳಸಿ ನಮ್ಮನ್ನು ಸುಮ್ಮನಾಗಿಸಲು ಮುಂದಾಗಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದ್ದಾರೆ.

‘ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ನಮಗೆ ಬರಬೇಕಾದ ಹಣ ತಲುಪದಿದ್ದಲ್ಲಿ ಶಾಸಕರ ಮನೆ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.