ADVERTISEMENT

ಮುಂಗಾರು ಆಗಮನ: ಶರಾವತಿ ಕಣಿವೆ ಪ್ರದೇಶದಲ್ಲಿ ಚಿಗುರೊಡೆದ ಕೃಷಿ ಕೆಲಸ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:31 IST
Last Updated 12 ಜುಲೈ 2019, 19:31 IST
ಕಾರ್ಗಲ್ ಪಟ್ಟಣದ ಹೊರವಲಯದಲ್ಲಿ ಕೃಷಿಕರು ಎತ್ತುಗಳ ಸಹಾಯದೊಂದಿಗೆ ಉಳುಮೆ ಕೆಲಸದಲ್ಲಿ ತೊಡಗಿರುವ ದೃಶ್ಯ
ಕಾರ್ಗಲ್ ಪಟ್ಟಣದ ಹೊರವಲಯದಲ್ಲಿ ಕೃಷಿಕರು ಎತ್ತುಗಳ ಸಹಾಯದೊಂದಿಗೆ ಉಳುಮೆ ಕೆಲಸದಲ್ಲಿ ತೊಡಗಿರುವ ದೃಶ್ಯ   

ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ವಿಳಂಬವಾಗಿ ಆಗಮಿಸಿದ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ.

ಒಣಗಿ ನಿಂತಿದ್ದ ಭತ್ತದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು, ಉಳುಮೆ ಕೆಲಸಕ್ಕೆ ಪೂರಕವಾದ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದ ನದಿ ತೀರ ಪ್ರದೇಶಗಳಾದ ಇಡುವಾಣಿ, ಮರಳುಕೋರೆ, ಕಾರ್ಗಲ್, ಜೋಗ, ಬಿದರೂರು, ಹೆನ್ನಿ ತಳಕಳಲೆ ಗ್ರಾಮಗಳು ಸೇರಿದಂತೆ ಭತ್ತದ ಗದ್ದೆಗಳಲ್ಲಿ ಎತ್ತುಗಳನ್ನು ಬಳಸಿ ಉಳುಮೆ ಕೆಲಸಕ್ಕೆ ರೈತರು ಮುಂದಾಗಿದ್ದಾರೆ.

ಚಿಗುರೊಡೆದ ಭತ್ತದ ಸಸಿಗಳನ್ನು ರೈತರು ನೆಡುವ ಕೆಲಸಕ್ಕೆ ಮುಂದಾಗಿರುವುದು ಕೆಲಭಾಗಗಳಲ್ಲಿ ಕಾಣಿಸುತ್ತಿದೆ. ಮಳೆ ಮಾರುತಗಳು ಒಂದೇ ಮಟ್ಟವನ್ನು ಕಾಯ್ದುಕೊಂಡರೆ ಕೃಷಿ ಚಟುವಟಿಕೆಗೆ ಸಹಾಯವಾಗುತ್ತದೆ ಎಂದು ಕೃಷಿಕ ವೀರರಾಜಯ್ಯ ಜೈನ್ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.