ADVERTISEMENT

ಶಿವಮೊಗ್ಗ ಜಿಲ್ಲೆಗೆ ಏ. 24ಕ್ಕೆ ಮೋದಿ ಭೇಟಿ?

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 17:01 IST
Last Updated 1 ಫೆಬ್ರುವರಿ 2022, 17:01 IST

ಶಿವಮೊಗ್ಗ: ಅಂದುಕೊಂಡಂತೆಯೇ ಎಲ್ಲವೂ ನಡೆದರೆ ಏ.24ರಂದು ‘ಪಂಚಾಯತ್ ರಾಜ್‌ ದಿವಸ್‌’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಜಿಲ್ಲೆಯ ಯಾವುದಾದರೂ ಒಂದು ಗ್ರಾಮ ಪಂಚಾಯಿತಿಯಲ್ಲಿ ಆಚರಿಸಲಿದ್ದಾರೆ.

ಪ್ರಧಾನಿ ಅವರು ಕರ್ನಾಟಕ ದಲ್ಲಿ ಪಂಚಾಯತ್ ರಾಜ್‌ ದಿವಸ ಆಚರಿಸಲು ಇಚ್ಛಿಸಿದರೆ ಜಿಲ್ಲೆಯ ಯಾವ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯವು ಜಿಲ್ಲಾಡಳಿತವನ್ನು ಕೋರಿದೆ.

ಕೋರಿಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಜಿಲ್ಲಾಡಳಿತವು ಶಿವಮೊಗ್ಗ ಬಳಿಯ ಕೊಮ್ಮನಾಳ್ ಅಥವಾ ಹೊಳಲೂರು ಪಂಚಾಯಿತಿ ಹೆಸರು ಅಂತಿಮಗೊಳಿಸುವ ಕುರಿತು ಚರ್ಚಿಸಿದ್ದಾರೆ. ಕಸ ವಿಲೇವಾರಿ ನಿರ್ವಹಣೆಯಲ್ಲಿ ಹೊಳಲೂರು ಪಂಚಾಯಿತಿ ರಾಜ್ಯಕ್ಕೆ ಮಾದರಿ ಯಾಗಿರುವುದೂ ಇದಕ್ಕೆ ಕಾರಣ.

ADVERTISEMENT

‘ಪ್ರಧಾನಮಂತ್ರಿ ಕಚೇರಿ ತೆಗೆದುಕೊಳ್ಳುವ ಅಂತಿಮ ನಿರ್ಧಾ ರದ ಮೇಲೆ ಜಿಲ್ಲೆಯ ಭೇಟಿ ಖಚಿತವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.