ADVERTISEMENT

ಉರುಳಿಬಿದ್ದ ಬಸ್‌: 20 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:12 IST
Last Updated 7 ಆಗಸ್ಟ್ 2022, 7:12 IST
ಹೊಳೆಹೊನ್ನೂರು ಸಮೀಪದ ಸಿದ್ಲೀಪುರ ಗ್ರಾಮದ ಬಳಿ ಖಾಸಗಿ ಬಸ್ ಉರುಳಿ ಬಿದ್ದಿರುವುದು
ಹೊಳೆಹೊನ್ನೂರು ಸಮೀಪದ ಸಿದ್ಲೀಪುರ ಗ್ರಾಮದ ಬಳಿ ಖಾಸಗಿ ಬಸ್ ಉರುಳಿ ಬಿದ್ದಿರುವುದು   

ಹೊಳೆಹೊನ್ನೂರು: ಪಟ್ಟಣ ಸಮೀಪದ ಸಿದ್ಲೀಪುರ ಗ್ರಾಮದ ಬಳಿ ಶನಿವಾರ ಖಾಸಗಿ ಬಸ್‌ ಉರುಳಿ ಬಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಎದುರು ಬಂದ ವಾಹನಕ್ಕೆ ದಾರಿಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ. ಮೂವರು ಗಂಭೀರವಾಗಿಗಾಯಗೊಂಡಿದ್ದಾರೆ.

ಎಲ್ಲರಿಗೂ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.

ADVERTISEMENT

ಶಿವಮೊಗ್ಗದ ಸೇತುವೆ ಬಳಿ ರೈಲು ಹಳಿಗೆ ಅಡ್ಡಲಾಗಿ ಶಿವಮೊಗ್ಗ-ಹೊಳೆಹೊನ್ನೂರು ಮಾರ್ಗದ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಕಾರ್ಯದಿಂದಾಗಿ ಭಾರಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಇದರಿಂದ ಶಿವಮೊಗ್ಗದಿಂದ ಹೊಳಲೂರು ಸನ್ಯಾಸಿಕೋಡಮಗ್ಗಿ ಮಾರ್ಗವಾಗಿ ಹೊಳೆಹೊನ್ನೂರು ಪಟ್ಟಣ ಸೇರುವ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದ್ದು, ಮಳೆಯಿಂದ ರಸ್ತೆ ಬದಿಯಲ್ಲಿ ಕೆಸರು ಇದೆ. ಹೀಗಾಗಿ ವಾಹನಗಳು ನಿಯಂತ್ರಣ ತಪ್ಪಿ ಅವಘಡ ಆಗುತ್ತಿವೆ ಸ್ಥಳೀಯರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.