ADVERTISEMENT

ಶರಣ್ಯ ಸಂಸ್ಥೆ: ಡಿ.8ಕ್ಕೆ ನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 11:33 IST
Last Updated 5 ಡಿಸೆಂಬರ್ 2019, 11:33 IST

ಶಿವಮೊಗ್ಗ: ಅಂಬೇಡ್ಕರ್ ಭವನದಲ್ಲಿ ಡಿ.8 ರಂದು ಸಂಜೆ 6.15ಕ್ಕೆ ಡಿಎಸ್ಎಲ್ ಟ್ರಸ್ಟ್‌ ಶರಣ್ಯ ಸಂಸ್ಥೆ ‘ನಮನ’ ಕಾರ್ಯಕ್ರಮ ಆಯೋಜಿಸಿದೆ.

ಶರಣ್ಯ ಸಂಸ್ಥೆ 15 ವರ್ಷಗಳಿಂದ ಉಲ್ಬಣಿಸಿದ ರೋಗ ಪೀಡಿತರಿಗೆ ಆರೈಕೆ, ಆಶ್ರಯ, ಸಾಂತ್ವನಮತ್ತು ಆತ್ಮಸ್ಥೈರ್ಯ ನೀಡುತ್ತಾ ಬಂದಿದೆ. ಸಾವಿರಾರು ರೋಗಿಗಳಿಗೆ ಆಶ್ರಯ ನೀಡಿದೆ. ಪ್ರಾರಂಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಾಂತ್ವನ ನೀಡಲು ಈ ಸಂಸ್ಥೆ ಪ್ರಾರಂಭವಾಗಿತ್ತು. ಆನಂತರ ಇತರ ರೋಗಿಗಳ ಆರೈಕೆಗೂ ಮುಂದಾಗಿದೆ. ಗಾಜನೂರು ಅಗ್ರಹಾರದಲ್ಲಿ ಸುಮಾರು 10.5 ಎಕರೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ,ರೋಗಿಗಳ ಸೇವೆ ಮಾಡುತ್ತಾ ಬಂದಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿಡಿ.ಎಲ್.ಮಂಜುನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೋಗಿಗಳಿಗೆ ಉಚಿತ ಆಶ್ರಯ ನೀಡಲಾಗುತ್ತಿದೆ. ರೋಗಿಗಳಿಗೆ ನೆರವಾಗುವ ಪೋಷಕರಿಗೆ ಉಳಿಯಲು ಅವಕಾಶ ನೀಡಲಾಗುತ್ತಿದೆ.ಊಟೋಪಚಾರ ಮಾಡಲಾಗುತ್ತಿದೆ. ತಜ್ಞ ವೈದ್ಯರ ಭೇಟಿ, ನಿರಂತರ ತಪಾಸಣೆ, ಕ್ರೀಡೆ, ಮನರಂಜನೆ, ಟಿವಿ ಸೌಲಭ್ಯಸೇರಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.15 ವರ್ಷದಲ್ಲಿ ಸಂಸ್ಥೆಗೆ ದಾನ ನೀಡಿದವರನ್ನು ನೆನಪಿಸಿಕೊಳ್ಳಲು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದುದೆ.ವಿಆರ್‌ಎಲ್‌ ಮುಖ್ಯಸ್ಥ ವಿಜಯಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ವಾಗ್ಮಿ ನಿತ್ಯಾನಂದ ವಿವೇಕವಂಶಿ ಉಪನ್ಯಾಸ ನೀಡುವರು.ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ,ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿಭಾಗವಹಿಸುವರು ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸಿ.ಎನ್.ಶ್ರೀನಿವಾಸ್, ರಾಮಚಂದ್ರ ಗುಣಾರಿ, ಕೆ.ಎಸ್.ಶ್ರೀನಿವಾಸ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಸಂಪತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.