ADVERTISEMENT

ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 12:55 IST
Last Updated 4 ಅಕ್ಟೋಬರ್ 2021, 12:55 IST
ಮಂಜುನಾಥ್
ಮಂಜುನಾಥ್   

ಹೊಳೆಹೊನ್ನೂರು: ಸಮೀಪದ ಕೂಡಲಿಯ ತುಂಗಭದ್ರಾ ನದಿಯ ಸಂಗಮದಲ್ಲಿ ಭಾನುವಾರ ಸ್ನಾನಕ್ಕೆ ತೆರಳಿ ಮುಳುಗಿದ್ದ ಯುವಕ ಹರೀಶನನ್ನು ಹುಡುಕುತ್ತಿದ್ದಾಗ ಮತ್ತೊಬ್ಬ ಯುವಕ ನದಿಯಲ್ಲಿ ಮುಳುಗುತ್ತಿದ್ದುದನ್ನು ಕಂಡ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನುಯ ರಕ್ಷಣೆ ಮಾಡಿ ಸಮಯಪ್ರಜ್ಞೆ ಮೆರೆದರು.

ಸೋಮವಾರ ಹರೀಶನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಥಳೀಯ ಯುವಕ ಮಂಜುನಾಥ್ ನದಿಯಲ್ಲಿ ಈಜಲು ತೆರಳಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಈಜಿ ಈಜಿ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೂಗಿದಾಗ, ಅಲ್ಲೇ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಬೋಟಿನ ಮೂಲಕ ತೆರಳಿ ಮಂಜುನಾಥನನ್ನು ರಕ್ಷಣೆ ಮಾಡಿದರು.

ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೀರೂರಿನ ಹರೀಶನ ಶೋಧ ಕಾರ್ಯ ಮುಂದುವರಿದಿದ್ದು, ಸೋಮವಾರ ಸಂಜೆಯಾದರೂ ಪತ್ತೆಯಾಗಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.