ADVERTISEMENT

ಸಾಗರ: ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರ ತಲುಪಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:24 IST
Last Updated 21 ಆಗಸ್ಟ್ 2025, 5:24 IST
ಸಾಗರದ ರಸ್ತೆ ಬದಿಯಲ್ಲಿ ಸಿಕ್ಕಿದ್ದ ಮಾಂಗಲ್ಯ ಸರವನ್ನು ಪೊಲೀಸ್ ಇಲಾಖೆಗೆ ತಲುಪಿಸಿದ ನಯನಾ ನಾರಾಯಣ್ ಅವರಿಗೆ ಬುಧವಾರ ಎಎಸ್‌ಪಿ ಬೆನಕ ಪ್ರಸಾದ್ ಅಭಿನಂದನಾ ಪತ್ರ ನೀಡಿದರು 
ಸಾಗರದ ರಸ್ತೆ ಬದಿಯಲ್ಲಿ ಸಿಕ್ಕಿದ್ದ ಮಾಂಗಲ್ಯ ಸರವನ್ನು ಪೊಲೀಸ್ ಇಲಾಖೆಗೆ ತಲುಪಿಸಿದ ನಯನಾ ನಾರಾಯಣ್ ಅವರಿಗೆ ಬುಧವಾರ ಎಎಸ್‌ಪಿ ಬೆನಕ ಪ್ರಸಾದ್ ಅಭಿನಂದನಾ ಪತ್ರ ನೀಡಿದರು    

ಸಾಗರ: ಇಲ್ಲಿನ ಸುಭಾಷ್ ನಗರ ಬಡಾವಣೆಯ ರಸ್ತೆ ಬದಿಯಲ್ಲಿ ನಯನಾ ನಾರಾಯಣ್ ಎಂಬುವವರಿಗೆ ಈಚೆಗೆ ಮಾಂಗಲ್ಯ ಸರವೊಂದು ದೊರಕಿತ್ತು. ನಯನಾ ಅವರು ಸರವನ್ನು ಡಿವೈಎಸ್‌ಪಿ ಕಚೇರಿಗೆ ತಲುಪಿಸಿದ್ದರು. 

ಜೆಪಿ ನಗರ ನಿವಾಸಿ ಚಂದ್ರಕಲಾ ಎಂಬುವವರು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ನಂತರ ಪೊಲೀಸರು ಚಂದ್ರಕಲಾ ಅವರಿಗೆ ಸರವನ್ನು ನೀಡಿದರು. ಪ್ರಾಮಾಣಿಕತೆಯಿಂದ ಸರವನ್ನು ಪೊಲೀಸರಿಗೆ ತಲುಪಿಸಿದ ನಯನಾ ಅವರಿಗೆ ಬುಧವಾರ ಎಎಸ್‌ಪಿ ಬೆನಕ ಪ್ರಸಾದ್ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT