ಶಿವಮೊಗ್ಗ: ಶಿಕಾರಿಪುರ ತಾಲ್ಲೂಕು ಮದಗದ ಹಾರನಹಳ್ಳಿ ಗ್ರಾಮದ ಬಹುತೇಕ ನಾಯಿಗಳಿಗೆ ಹುಚ್ಚು ಹಿಡಿದಿದೆ. ಒಂದೇ ದಿನ 40ಕ್ಕೂ ಹೆಚ್ಚು ನಾಯಿಗಳನ್ನು ಸಾಮೂಹಿಕವಾಗಿ ಸಾಯಿಸಲಾಗಿದೆ.
6 ತಿಂಗಳ ಹಿಂದೆ ಒಂದು ನಾಯಿಯಲ್ಲಿ ರೇಬಿಸ್ ಕಾಣಿಸಿಕೊಂಡಿತ್ತು. ಅದು ಹಸುವಿಗೆ ಕಚ್ಚಿತ್ತು. ಮೂರು ತಿಂಗಳ ನಂತರ ಹಸುವೂ ಮೃತಪಟ್ಟಿತ್ತು. ಅದನ್ನು ತೆಗೆದುಕೊಂಡು ಹೋಗಿ ಕೆಲವರು ಮದಗದ ಕೆರೆ ಅಂಗಳದಲ್ಲಿ ಎಸೆದು ಬಂದಿದ್ದಾರೆ. ಅದರ ಮಾಂಸ ತಿಂದ ಗ್ರಾಮದ ಎಲ್ಲ ನಾಯಿಗಳಿಗೂ ರೇಬಿಸ್ ತಗುಲಿದೆ. ನಾಲ್ಕು ದಿನಗಳಿಂದ ಎಲ್ಲವೂ ಹುಚ್ಚುಹುಚ್ಚಾಗಿ ವರ್ತಿಸುತ್ತ ಸಿಕ್ಕಸಿಕ್ಕವರನ್ನು ಕಚ್ಚಿವೆ. ತಕ್ಷಣ ಗುಡ್ಡದ ತುಮ್ಮಿನಕಟ್ಟೆ ಗ್ರಾಮ ಪಂಚಾಯಿತಿ ಎಲ್ಲ ನಾಯಿಗಳನ್ನೂ ಕೊಲ್ಲುವ ನಿರ್ಧಾರಕ್ಕೆ ಬಂದಿದೆ. ಸತ್ತ ನಾಯಿಗಳನ್ನು ಕೆರೆ ಸಮೀಪ ದೊಡ್ಡ ಹಳ್ಳ ತೋಡಿ ಮುಚ್ಚಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.