ADVERTISEMENT

ಹರ್ಷನ ಕುಟುಂಬಕ್ಕೆ ಹರಿದುಬಂತು ₹ 50 ಲಕ್ಷಕ್ಕೂ ಹೆಚ್ಚು ಹಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 5:48 IST
Last Updated 24 ಫೆಬ್ರುವರಿ 2022, 5:48 IST
ಶಿವಮೊಗ್ಗದಲ್ಲಿ ಬುಧವಾರ ಕರ್ಫ್ಯೂ ಕಾರಣ ಬಿಕೋ ಎನ್ನುತ್ತಿದ್ದ ಬಿ.ಎಚ್‌.ರಸ್ತೆ
ಶಿವಮೊಗ್ಗದಲ್ಲಿ ಬುಧವಾರ ಕರ್ಫ್ಯೂ ಕಾರಣ ಬಿಕೋ ಎನ್ನುತ್ತಿದ್ದ ಬಿ.ಎಚ್‌.ರಸ್ತೆ   

ಶಿವಮೊಗ್ಗ: ಮೃತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ನೆರವು ಹರಿದುಬರುತ್ತಿದೆ. ಬಹುತೇಕರು ಮೃತರ ತಾಯಿ ಪದ್ಮಾ ಅವರ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಖಾತೆಗೆ ಹಣ ನೀಡುತ್ತಿದ್ದಾರೆ. ಕೆಲವರು ಹರ್ಷ ಅವರ ಖಾತೆಗೆ ಜಮೆ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ₹ 10 ಲಕ್ಷ, ಬಿಜೆಪಿ ಯುವ ಮೋರ್ಚಾ ₹ 5 ಲಕ್ಷ, ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು ತಮ್ಮ ಫೌಂಡೇಷನ್‌ನಿಂದ ₹ 10 ಲಕ್ಷ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ₹ 6 ಲಕ್ಷ ಸೇರಿ ಹಲವರು ನೆರವು ನೀಡಿದ್ದಾರೆ.

ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್ ತಲಾ ₹ 2 ಲಕ್ಷ ಸೇರಿದಂತೆ ಇದುವರೆಗೂ ₹ 50 ಲಕ್ಷಕ್ಕೂ ಹೆಚ್ಚು ನೆರವು ಹರಿದುಬಂದಿದೆ. ಇನ್ನಷ್ಟು ನೆರವು ದೊರಕುವ ನಿರೀಕ್ಷೆ ಇದೆ. ಹರ್ಷ ಅವರ ತಂದೆ ನಾಗರಾಜ್ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇಬ್ಬರೂ ಸಹೋದರಿಯರ ಮದುವೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.