ಶಿವಮೊಗ್ಗ: ವಾರಾಂತ್ಯ ಭಾನುವಾರದ ರಜೆಯ ಮಜವನ್ನು ಶಿವಮೊಗ್ಗದ ಜನರು ಯುವ ದಸರಾ ಸಂಭ್ರಮದಲ್ಲಿ ನಟ ಶಿವರಾಜಕುಮಾರ್ ನೇತೃತ್ವದ ಮ್ಯೂಸಿಕಲ್ ನೈಟ್ ಜೊತೆ ಕಳೆಯಬಹುದಾಗಿದೆ.
ಯುವ ದಸರಾ ಅಂಗವಾಗಿ ಸೆ.28ರ ಸಂಜೆ 5 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಮ್ಯೂಸಿಕಲ್ ನೈಟ್ ಆಯೋಜಿಸಿದ್ದು, ಶಿವರಾಜಕುಮಾರ್ ಜೊತೆ ಗಾಯಕರಾದ ಹೇಮಂತ್ಕುಮಾರ್ ಹಾಗೂ ಅನುರಾಧ ಭಟ್ ನೇತೃತ್ವದ ತಂಡ ಪಾಲ್ಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.