ಸೊರಬ: ಸಾಮಾನ್ಯರಂತೆ ಬದುಕಿದ ಸ್ವಾಮಿ ವಿವೇಕಾನಂದರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಅಗ್ರಗಣ್ಯ ಸಂತರಾದರು ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾಮಠದ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾಶಕ್ತಿ, ಅಕ್ಕನಬಳಗ, ಬ್ರಾಹ್ಮಣ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಆರ್ಯ ಈಡಿಗರ ಸಂಘ ಸೇರಿ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠಗಳಲ್ಲಿ ಕೂತು ದರ್ಬಾರು ಮಾಡುವ ಸ್ವಾಮೀಜಿಗಿಂತ ಬಡವರ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ಸಮಾಜದ ಒಳಿತಿನ ಬಗ್ಗೆ ಚಿಂತಿಸುವ ಗುರುಗಳ ಕಾರ್ಯ ಮಹತ್ವದ್ದಾಗಿದೆ. ವಿವೇಕಾನಂದರು ಸಮಾಜದ ಬಗ್ಗೆ ನಂಬಿಕೆ ಇಟ್ಟು ಸಾಧನೆ ಮಾಡಿದ್ದರಿಂದಲೇ ವೀರ ಸನ್ಯಾಸಿ ಎನ್ನುವಹೆಸರು ಪಡೆಯಲು ಸಾಧ್ಯವಾಯಿತು ಎಂದರು.
ಡಾ.ಜ್ಞಾನೇಶ್ ಮಾತನಾಡಿದರು. ಹೊಸಪೇಟೆ ಬಡಾವಣೆಯ ಹೊಸಬಾಳೆ ರಸ್ತೆ ಮಾರ್ಗದ ವೃತ್ತಕ್ಕೆ ‘ಸ್ವಾಮಿ ವಿವೇಕಾನಂದ ವೃತ್ತ’ ಎಂದು ನಾಮಕರಣ ಮಾಡಲಾಯಿತು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಯುವ ಬ್ರಿಗೇಡ್ನ ಮಹೇಶ್ ಖಾರ್ವಿ, ಮಂಜು, ವಿನೋದ್ ವಾಲ್ಮೀಕಿ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ಬಜರಂಗದಳ ಸಂಚಾಲಕ ರಂಗನಾಥ ಮೊಗವೀರ್, ವಸಂತಿ ನಾವುಡಾ, ಅನಿತಾ ದಾಮ್ಲೆ, ಅರ್ಚನಾ ಬಾಪಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.