
ಸಾಗರ ; ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿಯ ವಸ್ತು ಸಂಗ್ರಹಾಲಯದ ನಿವೃತ್ತ ಕ್ಯುರೇಟರ್ ಕೆಳದಿ ವೆಂಕಟೇಶ್ ಜೋಯಿಸ್ ಅವರ ಸರ್ವಾಧ್ಯಕ್ಷತೆಯಲ್ಲಿ ಜ. 3 ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ ನಡೆಯಲಿದೆ.
ತಾಲ್ಲೂಕು ಇತಿಹಾಸ ವೇದಿಕೆ, ಕೆಳದಿ ರಿಸರ್ಚ್ ಫೌಂಡೇಷನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ಅಂದು ಬೆಳಿಗ್ಗೆ 10 ಕ್ಕೆ ಹಂಪಿ ಕನ್ನಡ ವಿವಿ ಅಧ್ಯಯನಾಂಗ ವಿಭಾಗದ ನಿರ್ದೇಶಕ ಅಮರೇಶ್ ಯತಗಲ್ ಉದ್ಘಾಟಿಸಿ ‘ಭಾರತೀಯ ಚರಿತ್ರೆ ರಚನೆಗೆ ಸ್ಥಳೀಯ ಇತಿಹಾಸದ ಕೊಡುಗೆ’ ಕುರಿತು ಮಾತನಾಡಲಿದ್ದಾರೆ.
‘ಹಸೆ ಚಿತ್ತಾರ- ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ’ ಕುರಿತು ಇತಿಹಾಸ ಸಂಶೋಧನಾ ವಿದ್ಯಾರ್ಥಿ ರವಿಚಂದ್ರ ಮಂಡಗಳಲೆ ಉಪನ್ಯಾಸ ನೀಡಲಿದ್ದಾರೆ. ಪ್ರಮುಖರಾದ ವಿ.ಟಿ.ಸ್ವಾಮಿ, ಕೆ.ಪ್ರಭಾಕರ್ ರಾವ್, ಪ್ರಸನ್ನ ಟಿ. ಗಣೇಶ್ ಪ್ರಸಾದ್, ಶ್ರೀಪಾದ ಹೆಗಡೆ, ಬಿಳಗಲ್ಲೂರು ಕೃಷ್ಣಮೂರ್ತಿ, ಕೆ.ಸಿದ್ದಪ್ಪ, ಉಮೇಶ್ ಹಿರೇನೆಲ್ಲೂರು, ಲಕ್ಷ್ಮಣ್ ಆರ್.ನಾಯ್ಕ್ ಹಾಜರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.