ಶಿರಾಳಕೊಪ್ಪ: ಪ್ರಚೋದನಕಾರಿ ಭಾಷಣದ ತುಣುಕೊಂದನ್ನು ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕಿದ ಕಾರಣ ಯುವಕನೊಬ್ಬನ ಮೇಲೆ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆ ಮಾಡಿದೆ.
ಚೈತ್ರಾ ಕುಂದಾಪುರ ಅವರ ಪ್ರಚೋದನಕಾರಿ ಭಾಷಣದ ತುಣುಕೊಂದನ್ನು ಶಿಕಾರಿಪುರ ರಸ್ತೆಯ 7 ಕ್ರೋರ್ ಬಟ್ಟೆ ಅಂಗಡಿಯ ಪ್ರಮೋದ್ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕಿದ್ದಾರೆ ಎಂದು ಆರೋಪಿಸಿದ ಅನ್ಯ ಕೋಮಿನ ಯುವಕರ ಗುಂಪು ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದೆ. ತಕ್ಷಣ ಪೋಲಿಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.