ADVERTISEMENT

ಮೂವರು ಕಳ್ಳರ ಬಂಧನ: ₹ 7.45 ಲಕ್ಷ ಮೌಲ್ಯದ ವಸ್ತು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 14:23 IST
Last Updated 30 ಜೂನ್ 2023, 14:23 IST
ಸಾಗರ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳಿಂದ ₹ 7.45 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಸಾಗರ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳಿಂದ ₹ 7.45 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ   

ಸಾಗರ: ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹ 7.45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಟ್ಕಳದ ಮದೀನ ಕಾಲೊನಿಯ ಮಹಮ್ಮದ್ ಇಫ್ಜಾಲ್, ಹೆಗ್ಗಲ್ ರಸ್ತೆಯ ಮಹಮ್ಮದ್ ಮುಸಾದಿಕ್, ಶಿರೂರು ಗ್ರಾಮದ ಯಾಸಿನ್ ಸಾಬ್ ಬಂಧಿತ ಆರೋಪಿಗಳು. ಎಎಸ್‌ಪಿ ರೋಹನ್ ಜಗದೀಶ್, ವೃತ್ತ ನಿರೀಕ್ಷಕರಾದ ಸೀತಾರಾಮ್ ಜೆ., ಕೆ.ವಿ. ಕೃಷ್ಣಪ್ಪ, ಪಿಎಸ್‌ಐ ಶ್ರೀಪತಿ, ತುಕಾರಾಮ್ ಸಾಗರ್ ಕರ್, ಸಿಬ್ಬಂದಿ ರತ್ನಾಕರ್, ನಾಗರಾಜ್ ನಾಯ್ಕ್, ಶ್ರೀಧರ್, ರಾಮನಗೌಡ ಪಾಟೀಲ್, ವಿಶ್ವನಾಥ್, ಪ್ರಭಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT