ADVERTISEMENT

ತೀರ್ಥಹಳ್ಳಿ: ವೈಭವದ ದಸರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:44 IST
Last Updated 16 ಅಕ್ಟೋಬರ್ 2021, 4:44 IST
ತೀರ್ಥಹಳ್ಳಿಯಲ್ಲಿ ಶುಕ್ರವಾರ ನಡೆದ ದಸರಾ ಮೆರವಣಿಗೆಗೆ ಚಂಡೆ ಬಾರಿಸುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು
ತೀರ್ಥಹಳ್ಳಿಯಲ್ಲಿ ಶುಕ್ರವಾರ ನಡೆದ ದಸರಾ ಮೆರವಣಿಗೆಗೆ ಚಂಡೆ ಬಾರಿಸುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು   

ತೀರ್ಥಹಳ್ಳಿ: ದಸರಾ ಅಂಗವಾಗಿ ಶುಕ್ರವಾರ ಪುರಾಣ ಪ್ರಸಿದ್ಧಶ್ರೀರಾಮೇಶ್ವರ ದೇವರ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಜಾಮುಂಡೇಶ್ವರಿ ದೇವಿಗೆ ಹಾರ ಅರ್ಪಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಪಟ್ಟಣದ ರಥಬೀದಿಯಿಂದ ಆರಂಭಗೊಂಡು ಆಗುಂಬೆ ಬಸ್ ನಿಲ್ದಾಣದ ಮಾರ್ಗವಾಗಿ ಕುಶಾವತಿ ನೆಹರೂ ಮೈದಾನ ತಲುಪಿತು. ಉತ್ಸವ ಮೂರ್ತಿಗೆ ವಿಶೇಷ ಪೂಜೆ ನಂತರ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.

ಮೆರವಣಿಗೆಯಲ್ಲಿ ಸಾಮಾಜಿಕ, ಪರಿಸರ ಜಾಗೃತಿಯ ಆಕರ್ಷಕ ಸ್ತಬ್ಧಚಿತ್ರ, ಬೃಹತ್ ಗೊಂಬೆ, ಕೀಲುಕುದುರೆ, ಹುಲಿವೇಷ ಸೇರಿ ವಿವಿಧ ಕಲಾತಂಡಗಳು ಗಮನ ಸೆಳೆದವು.

ADVERTISEMENT

ಕುಶಾವತಿ ಪಾರ್ಕ್‌ನಲ್ಲಿ ದಸರಾ ಉತ್ಸವದ ಅಂಗವಾಗಿ ಸಚಿವ ಆರಗ ಜ್ಞಾನೇಂದ್ರ, ವಿವಿಧ ಕ್ಷೇತ್ರಗಳ ಸಾಧಕರು, ಮಾಜಿ ಶಾಸಕರನ್ನು ದಸರಾ ಸಮಿತಿಯಿಂದ ಸನ್ಮಾನಿಸಲಾಯಿತು.

ಮೆರವಣಿಗೆಯಲ್ಲಿ ಸಚಿವ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಡಾ.ಎಸ್.ಬಿ. ಶ್ರೀಪಾದ್, ಉತ್ಸವದ ಸಂಚಾಲಕ ಸಂದೇಶ್ ಜವಳಿ, ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥ ಸೊಪ್ಪುಗುಡ್ಡೆ ರಾಘವೇಂದ್ರ, ವಿವಿಧ ಸಮಿತಿ ಸಂಚಾಲಕರಾದ ಅನಿಲ್ ವಿಧಾತ, ಡಾನ್ ರಾಮಣ್ಣ, ಬಿ.ಗಣಪತಿ, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಲಯನ್ಸ್ ಪಾಂಡುರಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯರು ಬೆಟ್ಟಮಕ್ಕಿ ನವೀನ್, ರತ್ನಾಕರ್ ಶೆಟ್ಟಿ, ನಮ್ರತ್, ಗೀತಾ ರಮೇಶ್, ಸುಶೀಲ ಶೆಟ್ಟಿ, ಮಂಜುಳಾ, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಮುಖ್ಯಾಧಿಕಾರಿ ಕುರಿಯಾ ಕೋಸ್, ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.